ಕ್ಯಾಂಪ್ಕೋ ಉದ್ಯೋಗಿ ವೆಂಕಟ್ರಮಣ ಗೌಡ ಕೊಂಬಾರುರವರ ಪ್ರಥಮ ವರ್ಷದ ಪುಣ್ಯಸ್ಮರಣೆ

0

ಪುತ್ತೂರು:ಕ್ಯಾಂಪ್ಕೋ ಉದ್ಯೋಗಿಯಾಗಿದ್ದ, ಕೊಂಬಾರು ನಿವಾಸಿ ದಿ.ವೆಂಕಟ್ರಮಣ ಗೌಡರ ಪ್ರಥಮ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವು ಅ.18ರಂದು ಎಪಿಎಂಸಿ ರೈತ ಸಭಾ ಭವನದಲ್ಲಿ ನಡೆಯಿತು.

ನುಡಿ ನಮನ ಸಲ್ಲಿಸಿದ ಎಪಿಎಂಸಿ ಮಾಜಿ ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ ಮಾತನಾಡಿ, ವೃತ್ತಿಯಲ್ಲಿ ನಿಷ್ಠೆ, ದಕ್ಷತೆ ಹಾಗೂ ಪ್ರಾಮಾಣಿಕತೆಗೆ ವೆಂಕಟ್ರಮಣ ಗೌಡರವರ ಸಾಕಾರಮೂರ್ತಿಯಾಗಿದ್ದರು. ಎಲ್ಲರೊಂದಿಗೆ ಉತ್ತಮ ರೀತಿಯಲ್ಲಿ ಬೆರೆತುಕೊಂಡಿದ್ದ ಅವರ ಜೀವನ ಶೈಲಿಯು ಸಮಾಜಕ್ಕೆ ಉತ್ತಮ ಸಂದೇಶ ಕೋಡುವ ರೀತಿಯಲ್ಲಿ ಸಾಗಿದ್ದರು ಎಂದರು.

ಎಪಿಎಂಸಿ ಕಾರ್ಯದರ್ಶಿ ರಾಮಚಂದ್ರ ವಕ್ವಾಡಿ ಮಾತನಾಡಿ, ತಾನು ದುಡಿಯುವ ಸಂಸ್ಥೆಯ ಮೇಲೆ ಬಹಳಷ್ಟು ನಂಬಿಕೆ, ಶ್ರದ್ಧೆಯಿಂದಿದ್ದ ವೆಂಕಟ್ರಮಣ ಗೌಡವರು ಎಪಿಎಂಸಿಯ ಕೆಲಸ ಕಾರ್ಯಗಳಲ್ಲಿಯೂ ಸಹಕಾರಿಯಾಗಿದ್ದರು. ಕ್ಯಾಂಪ್ಕೋ ಸಂಸ್ಥೆಯು ವೆಂಕಟ್ರಮಣ ಗೌಡ ಮೇಲೆ ಸಾಕಷ್ಟು ವಿಶ್ವಾಸನ್ನಿಟ್ಟುಕೊಂಡಿದ್ದರು ಎಂದರು.

ಕ್ಯಾಂಪ್ಕೋ ಸಿಬಂದಿ ಪ್ರಶಾಂತ್ ಭಟ್ ಮಾತನಾಡಿ, ಪರವೂರಿನಿಂದ ಬಂದಿರುವ ತನಗೆ ಉಳಿದುಕೊಳ್ಳಲು ಅವರ ಮನೆಯಲ್ಲಿ ಅವಕಾಶ ನೀಡಿರುವ ವೆಂಕಟ್ರಮಣ ಗೌಡರವರು ಸಹೋದರನಂತೆ ಎಲ್ಲಾ ರೀತಿಯ ಸಹಕಾರ, ಪ್ರೋತ್ಸಾಹ ನೀಡುತ್ತಿದ್ದರು ಎಂದರು.

ಕ್ಯಾಂಪ್ಕೋ ಉದ್ಯೋಗಿಗಳಾದ ಪ್ರಶಾಂತ್ ಭಟ್, ಸಚಿನ್, ಶ್ರೀಧರ್, ಕ್ಯಾಂಪ್ಕೋ ನಿವೃತ್ತ ಸಿಬಂದಿ ರವೀಂದ್ರ ರಾಮಕುಂಜ ನಿವೃತ್ತ ಎಎಸ್‌ಐ ಸುಬ್ರಾಯ ಹಿರೇಬಂಡಾರಿ ಮೊದಲಾದವರು ಮಾತನಾಡಿ ನುಡಿ ನಮನ ಸಲ್ಲಿಸಿದರು.
ಎಪಿಎಂಸಿ ಮಾಜಿ ಉಪಾಧ್ಯಕ್ಷ ಕರುಣಾಕರ ಗೌಡ ಎಲಿಯ, ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಮೌರೀಸ್ ಮಸ್ಕರೇನಸ್, ನಿವೃತ್ತ ಉಪ ವಲಯಾರಣ್ಯಾಧಿಕಾರಿ ಕೃಷ್ಣಪ್ಪ ಕೆ., ವೆಂಕಟ್ರಮಣ ಗೌಡರವರ ಕುಟುಂಬಸ್ಥರು, ಆತ್ಮೀಯ ಅಭಿಮಾನಿ ಬಳಗದವರು ಹಾಗೂ ಕ್ಯಾಂಪ್ಕೋ ಸಿಬಂದಿಗಳು ಸೇರಿದಂತೆ ಹಲವು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here