ಪುತ್ತೂರು: ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಅ.30 ರಂದು ಆದಿತ್ಯವಾರ ಭಕ್ತರ ಸಭೆ ಬೆಳಿಗ್ಗೆ 10ಕ್ಕೆ ಕರೆಯಲಾಗಿದೆ.
ಡಿ.27, 28, 29 ರಂದು ನಡೆಯುವ ವರ್ಷಾವಧಿ ಜಾತ್ರೋತ್ಸವ, ಭೂಮಿ ಖರೀದಿಗೆ ಆರ್ಥಿಕ ಕ್ರೋಡೀಕರಣ, ಜೀರ್ಣೋದ್ಧಾರ ಸಮಿತಿ ರಚನೆ ಬಗ್ಗೆ ಸಮಾಲೋಚಿಸಲು ಆರ್ಯಾಪು, _ಒಳಮೊಗ್ರು , ಕುರಿಯ ಮತ್ತಿತರ ಗ್ರಾಮಗಳ ಹಾಗೂ ಪರ ಊರ ಭಕ್ತರ ಸಭೆ ಕರೆಯಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಲಹೆ ಸೂಚನೆ ನೀಡಿ ಜಾತ್ರೋತ್ಸವ, ಅಭಿವೃದ್ಧಿ ಕಾರ್ಯದಲ್ಲಿ ಸಹಕರಿಸಬೇಕಾಗಿ ದೇವಳದ ಪ್ರಕಟಣೆ ತಿಳಿಸಿದೆ.