ಬೆಳಗ್ಗೆ ನಾಪತ್ತೆಯಾದ ವ್ಯಕ್ತಿ ಸಂಜೆ ಪತ್ತೆ

0

ಪುತ್ತೂರು:ಹಾಸನ ಮೂಲದ ವ್ಯಕ್ತಿಯೋರ್ವರು ಪುತ್ತೂರಿಗೆ ಮಗಳ ಮನೆಗೆ ಬಂದಿದ್ದ ಸಂದರ್ಭ ಬೆಳಗ್ಗೆ ನಾಪತ್ತೆಯಾಗಿದ್ದು,ಸಂಜೆ ವೇಳೆ ಪುತ್ತೂರು ಬಸ್‌ನಿಲ್ದಾಣದಲ್ಲಿ ಪತ್ತೆಯಾಗಿರುವ ಘಟನೆ ವರದಿಯಾಗಿದೆ.

ಹಾಸನ ಮೂಲದ ಸಯ್ಯದ್ ಶಫೀಕ್(78 ವ) ಎಂಬವರು ಪಡಿಲ್‌ನಲ್ಲಿರುವ ಮಗಳ ಮನೆಗೆ ಬಂದವರು ಬೆಳಿಗ್ಗೆ ನಾಪತ್ತೆಯಾಗಿದ್ದರು. ಈ ಕುರಿತು ಮನೆ ಮಂದಿ ಹುಡುಕಾಡಿದಾಗ ಸಂಜೆ ವೇಳೆ ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಅವರು ಕುಳಿತುಕೊಂಡಿರುವುದು ಗಮನಕ್ಕೆ ಬಂದಿದ್ದು ಮನೆಯವರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

LEAVE A REPLY

Please enter your comment!
Please enter your name here