ಅ.25: ಕೆಮ್ಮಿಂಜೆ ದೇವಸ್ಥಾನದಲ್ಲಿ ಗ್ರಹಣ ಶಾಂತಿ ಹವನ

0

ಪುತ್ತೂರು: ಅ.25ರಂದು ನಡೆಯಲಿರುವ ಗ್ರಸ್ತಾಸ್ತ ಸೂರ್ಯಗ್ರಹಣದ ಅಂಗವಾಗಿ ಗ್ರಹಣ ದೋಷವಿರುವ ರಾಶಿ ನಕ್ಷತ್ರದವರಿಗೆ ಪರಿಹಾರಾರ್ಥವಾಗಿ ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಹಾಗೂ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಸಂಜೆ ಸೂರ್ಯ ಗ್ರಹಣ ಶಾಂತಿ ಹವಣ ನಡೆಯಲಿದೆ.

ಗ್ರಹಣ ಶಾಂತಿ ಹವನವು ಸಂಜೆ 05-07 ರಿಂದ 06-29ರ ತನಕ ನಡೆಯಲಿದೆ. ಗ್ರಹಣ ದೋಷವಿರುವ ಸ್ವಾತಿ, ಚಿತ್ರಾ, ವಿಶಾಖಾ, ಆರ್ದ್ರಾ, ಶತಭಿಷೆ ನಕ್ಷತ್ರದವರು ಹಾಗೂ ತುಲಾ, ವೃಶ್ಚಿಕ, ಮೀನ, ಕರ್ಕಟಕ, ಮೇಷ, ಮಿಥುನ, ಕುಂಬ ಹಾಗೂ ಕನ್ಯಾ ರಾಶಿಯವರು ಗ್ರಹಣ ಶಾಂತಿ ಹವಣ ಮಾಡಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೇವಳದ ಕಚೇರಿ ಅಥವಾ ಮೊಬೈಲ್  6364261377 ನಂಬರನ್ನು ಸಂಪರ್ಕಿಸುವಂತೆ ದೇವಸ್ಥಾನದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here