ಕೆಮ್ಮಿಂಜೆ ದೇವಸ್ಥಾನದಲ್ಲಿ ಸೂರ್ಯಗ್ರಹಣ ಪರಿಹಾರಾರ್ಥ ಗ್ರಹಣ ಶಾಂತಿ ಹವನ

0

ಪುತ್ತೂರು: ಗ್ರಸ್ತಾಸ್ತ ಖಂಡಗ್ರಾಸ ಸೂರ್ಯಗ್ರಹಣದ ಅಂಗವಾಗಿ ಅ.25ರಂದು ಸಂಜೆ ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಹಾಗೂ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಗ್ರಹಣ ಶಾಂತಿ ಹವಣವು ನೆರವೇರಿತು.
ಸಂಜೆ ಗ್ರಹಣ ಸ್ಪರ್ಶ ಸಮಯದಲ್ಲಿ ಪ್ರಾರಂಭಗೊಂಡ ಹವಣ ಗ್ರಹಣ ಮೋಕ್ಷ ಕಾಲದ ತನಕ ನಡೆಯಿತು. ನಂತರ ಹವಣದ ಮಹಾಮಂಗಳಾರತಿ ಹಾಗೂ ಪ್ರಸಾದ‌ ವಿತರಣೆ ನಡೆಯಿತು.
ವ್ಯವಸ್ಥಾಪನಾ ಸಮಿತಿ‌ಅಧ್ಯಕ್ಷ ಸುಬ್ರಹ್ಮಣ್ಯ ಬಳ್ಳಕ್ಕುರಾಯ, ಸದಸ್ಯರಾದ ವಿಶ್ವನಾಥ ಗೌಡ, ವಿಶ್ವನಾಥ ನಾಯ್ಕ, ಚಂದ್ರಶೇಖರ, ಆನಂದ ಪೂಜಾರಿ, ಪ್ರೇಮಲತಾ ರಾವ್, ದಯಾನಂದ,
ವಿನುತಾ ಮೋಹನ್, ಅರ್ಚಕ ವೆಂಕಟೇಶ ಭಟ್, ವ್ಯವಸ್ಥಾಪಕ ಪ್ರಶಾಂತ್ ಉಪಸ್ಥಿತರಿದ್ದರು. ನೂರಾರು ಮಂದಿ ಭಕ್ತಾದಿಗಳು ಭಾಗವಹಿಸಿ, ಗ್ರಹಣ ಶಾಂತಿ ಹವಣ ನೆರವೇರಿಸಿ ಕೃತಾರ್ಥರಾದರು.

LEAVE A REPLY

Please enter your comment!
Please enter your name here