ಉಪ್ಪಿನಂಗಡಿ: ಅಕ್ರಮ ಜಾನುವಾರು ಸಾಗಾಟ ಪತ್ತೆ- ಆರೋಪಿ ವಶಕ್ಕೆ

0

ಉಪ್ಪಿನಂಗಡಿ: ಅಟೋ ರಿಕ್ಷಾದಲ್ಲಿ ಅಕ್ರಮವಾಗಿ ಹಿಂಸಾತ್ಮಕವಾಗಿ ದನದ ಕರುವೊಂದನ್ನು ಸಾಗಿಸುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿದ ಪೊಲೀಸರು ಆರೋಪಿಯನ್ನು ಬಂಧಿಸಿ, ದನದ ಕರುವನ್ನು ರಕ್ಷಿಸಿದ್ದಾರೆ.

ರಾಮನಗರ ಬಳಿಯ ನಿನ್ನಿಕಲ್ಲು ನಿವಾಸಿ ಅಬ್ದುಲ್ ರಹಿಮಾನ್ ಯಾನೆ ಪಿಸ್ತೂಲ್ (40) ಬಂಧಿತ ಆರೋಪಿ. ಈತ ನಿನ್ನೆ ದನದ ಗಂಡು ಕರುವೊಂದನ್ನು ರಿಕ್ಷಾದಲ್ಲಿ ಪ್ರಯಾಣಿಕರು ಕುಳಿತುಕೊಳ್ಳುವ ಸೀಟಿನ ಬಳಿ ಹಿಂಸಾತ್ಮಕವಾಗಿ ಕಟ್ಟಿ ವಧೆಗೆಂದು ಸಾಗಿಸುತ್ತಿದ್ದನು. ಇದರ ಖಚಿತ ವರ್ತಮಾನ ಪಡೆದ ಉಪ್ಪಿನಂಗಡಿ ಪೊಲೀಸರು ನೂಜಿ ಬಳಿ ಈತನ ರಿಕ್ಷಾವನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡಿದ್ದಾರೆ. ಕರುವಿನ ಮೌಲ್ಯ ಎರಡೂವರೆ ಸಾವಿರ ರೂ. ಹಾಗೂ ರಿಕ್ಷಾದ ಮೌಲ್ಯ ಒಂದು ಲಕ್ಷವೆಂದು ಅಂದಾಜಿಸಲಾಗಿದೆ.

LEAVE A REPLY

Please enter your comment!
Please enter your name here