ರಾಮಕುಂಜ: ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಶಾಸನ ರಚನೆ ಮತ್ತು ಸಂಸದೀಯ ವ್ಯವಹಾರಗಳ ಇಲಾಖೆ ನಡೆಸುವ ಪ್ರೌಢಶಾಲಾ ಹಂತದ ಯುವ ಸಂಸತ್ತು ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಹಂತದಲ್ಲಿ ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜ್ನ ಪ್ರೌಢಶಾಲೆ ವಿಭಾಗದ 9 ನೇ ತರಗತಿ ಆಂಗ್ಲ ಮಾಧ್ಯಮ ವಿಭಾಗದ ವಿದ್ಯಾರ್ಥಿನಿ ಅದಿತಿ ಆರ್ ರೈಯವರು ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಸಂಸ್ಥೆಯ ಉಪ ಪ್ರಾಚಾರ್ಯ ಶ್ರೀಧರ ಭಟ್ ಅವರ ಮಾರ್ಗದರ್ಶನದಲ್ಲಿ ಸಮಾಜ ವಿಜ್ಞಾನ ಅಧ್ಯಾಪಕಿ ಸುಮಾ ಆರ್ ಮತ್ತು ನಿವೃತ್ತ ಅಧ್ಯಾಪಕ ಗುಡ್ಡಪ್ಪ ಬಲ್ಯ ರವರು ಈಕೆಗೆ ತರಬೇತಿ ನೀಡಿದ್ದರು. ಈಕೆ ಉಪ್ಪಿನಂಗಡಿ ರಾಮನಗರ ನಿವಾಸಿ ರಾಮಣ್ಣ ರೈ ಮತ್ತು ಉಮಾವತಿ ಕೆ., ದಂಪತಿಯ ಪುತ್ರಿ.