ಡಾ.ಡಿ.ವಿರೇಂದ್ರ ಹೆಗ್ಗಡೆ ಜನ್ಮ ದಿನಾಚರಣೆ: ಮಜ್ಜಾರಡ್ಕ ಶೌರ್ಯ, ವಿಷ್ಣು ಯುವಶಕ್ತಿ ಬಳಗದಿಂದ ವಿವಿಧ ಕಾರ್ಯಕ್ರಮ

0

ಪುತ್ತೂರು: ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಡೆಯವರ ಹುಟ್ಟುಹಬ್ಬದ ಪ್ರಯುಕ್ತ ಶೌರ್ಯ ಮಜ್ಜಾರಡ್ಕ ಘಟಕ ಮತ್ತು ಮಜ್ಜಾರಡ್ಕ ಶ್ರೀ ವಿಷ್ಣು ಯುವಶಕ್ತಿ ಸಂಘಟನೆ ವತಿಯಿಂದ ವಿವಿಧ ಕಾರ್ಯಕ್ರಮಗಳು ನಡೆಯಿತು.

ಕುಂಬ್ರ ವಲಯ ಮಜ್ಜಾರಡ್ಕ ಘಟಕ ಮತ್ತು ಶ್ರೀವಿಷ್ಣು ಯುವಶಕ್ತಿ ಬಳಗ ಮಜ್ಜಾರಡ್ಕ ಸದಸ್ಯರಿಂದ ಪುತ್ತೂರಿನ ಬ್ಲಡ್ ಬ್ಯಾಂಕ್ ನಲ್ಲಿ ರಕ್ತದಾನ ನಡೆಯಿತು. ತಿಂಗಳಾಡಿ ಪ್ರಾಥಮಿಕ ಶಾಲೆ, ಮಜ್ಜಾರಡ್ಕ ಅಂಗನವಾಡಿ, ತ್ಯಾಗರಾಜ ನಗರ ಅಂಗನವಾಡಿ, ತಿಂಗಳಾಡಿ ಅಂಗನವಾಡಿ ಮಕ್ಕಳಿಗೆ ಸಿಹಿ ತಿಂಡಿ ವಿತರಣೆ ಮಾಡಲಾಯಿತು.ಪುತ್ತೂರು ಬಿರುಮಲೆ ಬೆಟ್ಟದಲ್ಲಿರುವ ಪ್ರಜ್ಞಾ ವಿಶೇಷ ಮಕ್ಕಳ ಆಶ್ರಮದಲ್ಲಿ ಸಿಹಿ ತಿಂಡಿ ಹಾಗೂ ಶ್ರೀ ವಿಷ್ಣು ಯುವಶಕ್ತಿ ಬಳಗದ ಗೌರವ ಸಲಹೆಗಾರ ಕಿಶೋರ್ ಶೆಟ್ಟಿ ಅರಿಯಡ್ಕ ಇವರ ಹುಟ್ಟುಹಬ್ಬದ ಪ್ರಯುಕ್ತ ಸಂಘಟನೆ ಉಪಾಧ್ಯಕ್ಷರಾದ ರಘುನಾಥ್ ಪೂಜಾರಿ ಇವರು ರಾತ್ರಿಯ ಭೋಜನದ ವ್ಯವಸ್ಥೆಯನ್ನು ಮಾಡಿದರು.

ಕಾರ್ಯಕ್ರಮದಲ್ಲಿ ವಿಷ್ಣು ಯುವಶಕ್ತಿ ಬಳಗದ ಅಧ್ಯಕ್ಷ ಉದಯ್ ಸ್ವಾಮಿನಗರ, ಯುವಶಕ್ತಿ ಮಜ್ಜಾರಡ್ಕ ಸಂಘಟನ ಕಾರ್ಯದರ್ಶಿ ಹಾಗೂ ಶೌರ್ಯ ವಿಪತ್ತು ಮಜ್ಜಾರಡ್ಕ ಘಟಕದ ಪ್ರತಿನಿಧಿ ರಾಜೇಶ್ ಕೆ ಮಯೂರ, ಕುಂಬ್ರ ವಲಯದ ಸಂಯೋಜಕ ಆನಂದ ರೈ ಮಠ ಹಾಗೂ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here