ಉಪ್ಪಿನಂಗಡಿ ಜೇಸಿಐನಿಂದ 20 ವಿದ್ಯಾರ್ಥಿಗಳಿಗೆ ರೂ.50000 ವಿದ್ಯಾರ್ಥಿವೇತನ ವಿತರಣೆ

0

ಉಪ್ಪಿನಂಗಡಿ: ಉಪ್ಪಿನಂಗಡಿ ಜೇಸಿಐ ವತಿಯಿಂದ 2022ನೇ ಸಾಲಿನ ವಲಯಾಧ್ಯಕ್ಷ ಜೇಸಿ ರೋಯನ್ ಉದಯ ಕ್ರಾಸ್ತಾ, ವಲಯ ವಿದ್ಯಾರ್ಥಿವೇತನ ನಿರ್ದೇಶಕ ಜೇಸಿ ಉದಯ ನಾಯ್ಕ್ ಮತ್ತು ಜೇಸಿಐ ಉಪ್ಪಿನಂಗಡಿ ಘಟಕಾಧ್ಯಕ್ಷ ಜೇಸಿ ಮೋಹನ್ ಚಂದ್ರ ತೋಟದ ಮನೆಯವರ ಮಾರ್ಗದರ್ಶನದಲ್ಲಿ 9ರಿಂದ 12ನೇ ತರಗತಿಗಳಲ್ಲಿ ಅಧ್ಯಯನ ಮಾಡುವ ಆರ್ಥಿಕವಾಗಿ ಹಿಂದುಳಿದ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಯಿತು.

ಉಪ್ಪಿನಂಗಡಿ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಾದ ವಂದನಾ, ಧನ್ಯಶ್ರೀ, ಹರ್ಷೀಣಿ, ಇಂದ್ರಪ್ರಸ್ಥ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಚೈತ್ರ, ಕಾಂಚನ ವೆಂಕಟಸುಬ್ರಹ್ಮಣ್ಯಂ ಸ್ಮಾರಕ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಪೂರ್ವವಿಕ, ದಿವ್ಯ, ರಕ್ಷಿತಾ, ಪವನ್, ಅಭಿಲಾಷ್, ದೀಕ್ಷಿತಾ, ಸುಜನ್, ಹೀತಾಕ್ಷಿ, ಲೋಹಿತ್, ನಿರೀಕ್ಷಾ, ಸುಪ್ರೀತ್, ಶರವಣ್, ನಂದಕುಮಾರ್, ಪ್ರಣ್ಮಯ, ನವ್ಯಶ್ರೀ, ಮೋಕ್ಷಿತಾರವರಿಗೆ ರೂ.೫೦ ಸಾವಿರ ವಿದ್ಯಾರ್ಥಿ ವೇತನ ನೀಡಲಾಯಿತು. ಕಾಂಚನ ಪ್ರೌಢಶಾಲಾ ಮುಖ್ಯಗುರು ಸೂರ್ಯಪ್ರಕಾಶ ಉಡುಪ ಮತ್ತು ಸಿಬ್ಬಂದಿ ವರ್ಗ ಸಹಕರಿಸಿದರು.

LEAVE A REPLY

Please enter your comment!
Please enter your name here