ದ.4: ಮೊಟ್ಟೆತ್ತಡ್ಕ ಮಜಲು ಕ್ಷೇತ್ರದಲ್ಲಿ ಬೆಂಕಿನಾಥೇಶ್ವರ ಮೇಳದವರಿಂದ ‘ಶ್ರೀ ಶಬರಿಮಲೆ ಸ್ವಾಮಿ ಅಯ್ಯಪ್ಪ’ ಯಕ್ಷಗಾನ ಬಯಲಾಟ, ಸಂಜೆ ನೇಮೋತ್ಸವ

0

ಪುತ್ತೂರು: ಕಲಿಯುಗ ಕಲೆ, ಕಾರಣಿಕ ಇತಿಹಾಸ ಪ್ರಸಿದ್ಧ ಕ್ಷೇತ್ರವಾಗಿರುವ ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ಮಜಲು ಸ್ವಾಮಿ ಕೊರಗಜ್ಜ, ಅಗ್ನಿ ಕಲ್ಲುರ್ಟಿ ದೈವಸ್ಥಾನದಲ್ಲಿ ದ.4ರಂದು ರಾತ್ರಿ ಶ್ರೀ ಬೆಂಕಿನಾಥೇಶ್ವರ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ, ಬಾಳ ಕಳವಾರು ಮಂಗಳೂರು ಇವರಿಂದ ‘ಶ್ರೀ ಶಬರಿಮಲೆ ಸ್ವಾಮಿ ಅಯ್ಯಪ್ಪ’ ಯಕ್ಷಗಾನ ಬಯಲಾಟ ನಡೆಯಲಿದೆ.

ಬೆಳಿಗ್ಗೆ 7 ಗಂಟೆಗೆ ಗಣಪತಿ ಹೋಮ ನಡೆಯಲಿದೆ. ಸಂಜೆ 6 ಗಂಟೆಗೆ ಕೊರಗಜ್ಜ ದೈವದ ವೈಭವದ ನೇಮೋತ್ಸವ ನಡೆಯಲಿದೆ. ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆದು ನಂತರ ಯಕ್ಷಗಾನ ಬಯಲಾಟ ನಡೆಯಲಿದೆ. ಭಕ್ತಾಭಿಮಾನಿಗಳು ಹಾಗೂ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಕ್ಷೇತ್ರದ ಧರ್ಮದರ್ಶಿ ಮಣಿಸ್ವಾಮಿ ತಿಳಿಸಿದ್ದಾರೆ.

ಹಗಲು ಕೋಲ ಇಲ್ಲ: ಕ್ಷೇತ್ರದಲ್ಲಿ ಸಂಕ್ರಮಣ ದಿನದ ಹೊರತುಪಡಿಸಿ ಪ್ರತಿ ಆದಿತ್ಯವಾರ ಮಧ್ಯಾಹ್ನ 12 ಗಂಟೆಗೆ ಸ್ವಾಮಿ ಕೊರಗಜ್ಜ ದೈವದ ಹಗಲು ಕೋಲ,ಅಗೇಲು ಸೇವೆ ನಡೆಯುತ್ತದೆ.ಆದರೆ ದ.4ರಂದು ರಾತ್ರಿ ಕ್ಷೇತ್ರದಲ್ಲಿ ಯಕ್ಷಗಾನ ಬಯಲಾಟ ಪ್ರದರ್ಶನದ ಹಿನ್ನೆಲೆಯಲ್ಲಿ ಮಧ್ಯಾಹ್ನ 12 ಗಂಟೆಯ ಬದಲು ಸಂಜೆ 6 ಗಂಟೆಗೆ ಸ್ವಾಮಿ ಕೊರಗಜ್ಜ ದೈವದ ಕೋಲ,ಅಗೇಲು ಸೇವೆ ನಡೆಯಲಿದೆ ಎಂದು ಕ್ಷೇತ್ರದ ಧರ್ಮದರ್ಶಿ ಮಣಿಸ್ವಾಮಿ ತಿಳಿಸಿದ್ದಾರೆ.

‘ಮಜಲ್‌ದ ಮದಿಪು’ ಪದ್ಮರಾಜ್ ಬಿ.ಸಿ.ಚಾರ್ವಾಕ ಸಂಗೀತ ನಿರ್ದೇಶನ, ಸಾಹಿತ್ಯದಲ್ಲಿ ಬಾಲಕೃಷ್ಣ ನೆಟ್ಟಾರು ಅವರು ಹಾಡಿರುವ ‘ಮಜಲ್‌ದ ಮದಿಪು’ ವಿಡಿಯೋ ಹಾಡು ಇದೇ ಸಂದರ್ಭ ಬಿಡುಗಡೆಗೊಳ್ಳಲಿದೆ.

LEAVE A REPLY

Please enter your comment!
Please enter your name here