ಸವಣೂರು ಕುಮಾರಧಾರ ಅಟೋ ರಿಕ್ಷಾ ಚಾಲಕ-ಮಾಲಕರ ಸಂಘದ ಸಾಮಾನ್ಯ ಸಭೆ

0

ಪುತ್ತೂರು: ಕುಮಾರಧಾರ ಅಟೋ ರಿಕ್ಷಾ ಚಾಲಕ-ಮಾಲಕರ ಸಂಘದ ಸಾಮಾನ್ಯ ಸಭೆಯು ಇತ್ತೀಚೆಗೆ ನಡೆಯಿತು. ಪುತ್ತೂರು ಸಬ್‌ರಿಜಿಸ್ಟ್ರರ್ ಕಚೇರಿಯಲ್ಲಿ ನೊಂದಾವಣೆಗೊಂಡಿರುವ ಸಂಘಕ್ಕೆ ನೂತನವಾಗಿ ಗೌರವಾಧ್ಯಕ್ಷರಾಗಿ ಸವಣೂರು ಸಿ.ಎ ಬ್ಯಾಂಕಿನ ನಿರ್ದೇಶಕ ಕರುಣಾಕರ ಪೂಜಾರಿ ಪಟ್ಟೆ, ಗೌರವ ಸಲಹೆಗಾರರಾಗಿ ಡಾ. ಸುಬ್ರಹ್ಮಣ್ಯ ಭಟ್, ವೈದ್ಯಕೀಯ ಸಲಹೆಗಾರರಾಗಿ ಡಾ.ಶ್ಯಾಮಸುಂದರ್, ಕಾನೂನು ಸಲಹೆಗಾರರಾಗಿ ನ್ಯಾಯವಾದಿ ಪ್ರವೀಣ್ ಬಂಬಿಲದೋಳರವರುಗಳನ್ನು ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಸಂಘದ ಅಧ್ಯಕ್ಷ ಹಸೈನಾರ್ ಕಾಯರ್ಗ, ಉಪಾಧ್ಯಕ್ಷ ಹೊನ್ನಪ್ಪ ಪೂಜಾರಿ ದೇವಸ್ಯ, ಕಾರ‍್ಯದರ್ಶಿ ರಾಧಾಕೃಷ್ಣ ಓಡಂತರ‍್ಯ, ಉಪಕಾರ‍್ಯದರ್ಶಿ ಇಬ್ರಾಹಿಂ ಕೆ, ಕೋಶಾಧಿಕಾರಿ ರಾಘವೇಂದ್ರ ಕೆ ಮತ್ತು ಸಂಘದ ಸರ್ವ ಸದಸ್ಯರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here