ಬೆಂಗಳೂರಿನಲ್ಲಿ ಸೌಂದರ್ಯ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಲಿಮಿಟೆಡ್‌ನ ಪ್ರಧಾನ ಕಚೇರಿಯ ನೂತನ‌ ಕಟ್ಟಡಕ್ಕೆ ಭೂಮಿಪೂಜೆ

0
ಪುತ್ತೂರು: ಪುತ್ತೂರಿನ ಮುಖ್ಯ ರಸ್ತೆಯಲ್ಲಿರುವ ಎಸ್‌.ಬಿ.ಬಿ. ಸೆಂಟರ್ ನಲ್ಲಿ ಶಾಖೆಯನ್ನು ಹೊಂದಿರುವ  ಸೌಂದರ್ಯ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಲಿಮಿಟೆಡ್ ನ ಬೆಂಗಳೂರಿನಲ್ಲಿರುವ ಕೇಂದ್ರ ಕಛೇರಿಯ ನೂತನ ಕಟ್ಟಡ ನಿರ್ಮಾಣದ ಭೂಮಿಪೂಜೆಯು ಬೆಂಗಳೂರಿನ  ಹೆಸರಘಟ್ಟ ಮುಖ್ಯರಸ್ತೆಯ ಪ್ರಧಾನ ಕಛೇರಿಯ  ಹಿಂಭಾಗದ ಸಹಕಾರಿಯ ನಿವೇಶನದಲ್ಲಿ ಡಿ.9ರಂದು ನಡೆಯಿತು. 
 ಸಹಕಾರಿಯ ಅಧ್ಯಕ್ಷರಾದ  ಮಂಜಪ್ಪ ಪಿ. ರವರು ಭೂಮಿ ಪೂಜೆ ನೆರವೇರಿಸಿದರು. ಸಹಕಾರಿಯ ಉಪಾಧ್ಯಕ್ಷರಾದ  ಸುನಿತಾ ಎಂ, 
ನಿರ್ದೇಶಕರಾದ ಕೀರ್ತನ್ ಕುಮಾರ್ ಎಂ, ಗೋಪಿನಾಥ ಎನ್,  ಚಿನ್ನಮ್ಮ ಪಿ ಪಿ, ಸುರೇಶ್ ಸಿ ಹೆಗಡಿ, ರಾಜಶೇಖರಮೂರ್ತಿ ಎಚ್ ಎಮ್,  ರಜನಿ ಪಿ ಸೂರಿ,  ಮಂಜುನಾಥ ಭಟ್ ಹಾಗೂ ಮುಖ್ಯ  ಕಾರ್ಯನಿರ್ವಹಣಾಧಿಕಾರಿಯವರಾದ ಹೇಮಂತ ಬಿ ವಿ,  ಸಿಬ್ಬಂದಿಗಳಾದ ಗಂಗಾತಿಲಕ ಎ. ಎನ್., ಭರತ್ ಆರ್, ಶೃಂಗಾ ವಿ., ದಿವ್ಯಾ ಬಿ. ಆರ್., ಅಮೃತಾ, ಮೋನಿಷಾ ಎಸ್. ಹಾಗೂ ಸಹಕಾರಿಯ ನೆಲಮಂಗಲ ಶಾಖೆಯ ವ್ಯವಸ್ಥಾಪಕರಾದ ಮಹಾಂತೇಶ ನೆಗಳೂರ ರವರುಗಳು ಉಪಸ್ಥಿತರಿದ್ದರು. ಸೌಂದರ್ಯ ಸಮೂಹ ವಿದ್ಯಾಸಂಸ್ಥೆಗಳ ಸಿಬ್ಬಂದಿಗಳಾದ ರಮೇಶ್ ಬಿ ಆರ್, ಕೇಶವಮೂರ್ತಿ ಎನ್ ಆರ್, ರೇಣುಕಾ ದೇವಿ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here