ಪುತ್ತೂರು ಭಾಲಾವಲೀಕಾರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘದ ಕ್ರೀಡಾಕೂಟದ ಆಮಂತ್ರಣ ಪತ್ರ ಬಿಡುಗಡೆ

0

ಪುತ್ತೂರು: ಭಾಲಾವಲೀಕಾರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘದ ಶತಮಾನೋತ್ಸವದ ಶತಕಾರ್ಯಕ್ರಮದ ಅಂಗವಾಗಿ ದ. 17ಮತ್ತು 18ರಂದು ವಿವೇಕಾನಂದ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಲಿರುವ ಕ್ರೀಡಾಕೂಟದ ಆಮಂತ್ರಣ ಪತ್ರ ಮತ್ತು ವೇಳಾಪಟ್ಟಿ ಬಿಡುಗಡೆಯು ದರ್ಬೆಯ ಸಚ್ಚಿದಾನಂದ ಸೇವಾ ಸದನದಲ್ಲಿ ನಡೆಯಿತು.



ಚಲನಚಿತ್ರ ನಟ ,ರಂಗಭೂಮಿ‌ಕಲಾವಿದ ವಿನಾಯಕ ಜೆಪ್ಪು ಕ್ರೀಡಾಕೂಟದ ಆಮಂತ್ರಣ ಪತ್ರ ಬಿಡುಗಡೆ ಮಾಡಿ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಶುಭಹಾರೈಸಿದರು . ವೇದಿಕೆಯಲ್ಲಿ ಪುದುಪ್ಪಾಡಿ ಅಯ್ಯಪ್ಪಸ್ವಾಮಿ ದೇವಸ್ಥಾನದ ಅಧ್ಯಕ್ಷ ರಾಮಕೃಷ್ಣ ಬೋರ್ಕರ್ ಬೇಟೋಳಿ, ಸಂಘದ ಉಪಾಧ್ಯಕ್ಷ ಹರೀಶ್ ಬೋರ್ಕರ್ ಕತ್ತಲಕಾನ, ಕೋಶಾಧಿಕಾರಿ ರಮೇಶ್ ಪ್ರಭು ಸಂಪ್ಯ, ಕಿರಣ್ ಬೇಟೋಳಿ ,ಮಧುಸೂದನ್ ಬಜತ್ತನೆ, ವಿಘ್ನೇಶ್ ಕೊಡಗು, ಸುನಾದ್ ವಿರಾಜಪೇಟೆ ಉಪಸ್ಥಿತರಿದ್ದರು. ಹರೀಶ್ ಬೋರ್ಕರ್ ಸ್ವಾಗತಿಸಿ, ರಮೇಶ್ ಪ್ರಭು ವಂದಿಸಿದರು .

LEAVE A REPLY

Please enter your comment!
Please enter your name here