ಡಿ.17 : ನೆಹರೂ ನಗರದ ವಿವೇಕಾನಂದ ಸಿ. ಬಿ. ಎಸ್. ಇ. ಶಾಲೆಯ ವಾರ್ಷಿಕೋತ್ಸವ

0

ಪುತ್ತೂರು: ನೆಹರು ನಗರದಲ್ಲಿರುವ ವಿವೇಕಾನಂದ ಸಿ. ಬಿ. ಎಸ್. ಇ. ಶಾಲೆಯ ವಾರ್ಷಿಕೋತ್ಸವವು ಡಿ.17ರಂದು  ಜರುಗಲಿದೆ. ಸಾಯಂಕಾಲ 3 ಗಂಟೆಗೆ ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷರಾದ  ಸತೀಶ್ ರಾವ್ ಪಿ. ಯವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮವಿದ್ದು, ಮುಖ್ಯ ಅತಿಥಿಗಳಾಗಿ ಎ. ಜೆ. ಮೆಡಿಕಲ್ ಕಾಲೇಜ್ ನ ಅಸಿಸ್ಟೆಂಟ್ ಪ್ರೊಫೆಸರ್ ಆಗಿರುವ ಡಾ| ಕಿಶನ್ ರಾವ್ ಹಾಗೂ  ಎಸ್. ಶ್ರೀರಂಗ ಶಾಸ್ತ್ರಿ ಇವರು ಭಾಗವಹಿಸಲಿದ್ದಾರೆ. ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷೆ  ವಸಂತಿ ಕೆ, ಸಂಚಾಲಕರಾದ ಶ್ರೀ ಭರತ್ ಪೈ ಹಾಗೂ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಡಾ| ದೀಪಕ್ ವೇದಿಕೆಯಲ್ಲಿ ಉಪಸ್ಥಿತರಿರುವರು.

ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸದಸ್ಯರುಗಳು ಹಾಗೂ ಎಲ್ಲಾ ಪೋಷಕರು ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಲಿದೆ ಎಂದು ಶಾಲೆಯ ಮುಖ್ಯೋಪಾಧ್ಯಾಯಿನಿ  ಸಿಂಧೂ ವಿ. ಜಿ. ತಮ್ಮ ಶಾಲಾ ಪ್ರಕಟಣೆಯಲ್ಲಿ ತಿಳಿಸಿರುವರು.

LEAVE A REPLY

Please enter your comment!
Please enter your name here