ಬಣ್ಣ, ಸ್ಪಷ್ಟ, ಅತ್ಯುತ್ಕೃಷ್ಟ ಗುಣಮಟ್ಟದ ವಜ್ರಾಭರಣಗಳ ವಾರ್ಷಿಕ ಹಬ್ಬ ‘ಗ್ಲೊ ಫೆಸ್ಟ್‌ಗೆ ಪುತ್ತೂರು ಜಿ.ಎಲ್.ಆಚಾರ್ಯ ಜ್ಯುವೆಲ್ಲರ್‍ಸ್‌ನಲ್ಲಿ ಚಾಲನೆ

0

ನಾಲ್ವರು ಮಹಿಳಾ ಸಾಧಕಿಯರಿಂದ ದೀಪ ಪ್ರಜ್ವಲನೆ

ಆಭರಣ ಖರೀದಿಸಲು ಜಿ.ಎಲ್ ಮಳಿಗೆ ಪ್ರೇರಣೆ – ನಯನಾ ವಿ ರೈ
ಆಭರಣ ಖರೀದಿ ಭಾವನಾತ್ಮಕ ಸಂಬಂಧ ಬೆಳೆಸುತ್ತದೆ – ಡಾ. ಅನಿಲ ದೀಪಕ್ ಶೆಟ್ಟಿ
ಎಲ್ಲಾ ವರ್ಗದವರ ಆಯ್ಕೆಗೆ ಸೂಕ್ತ ಮಳಿಗೆ – ರೂಪಲೇಖ
ಇವತ್ತಿಗೂ ವಿಶ್ವಾಸ, ಗುಣಮಟ್ಟವನ್ನು ಕಾಯ್ದುಕೊಂಡಿದೆ – ರಂಜಿತಾ ಶಂಕರ್
ಹೊಸತನ ಪರಿಚಸುವುದು ನಮ್ಮ ಉದ್ದೇಶ – ಜಿ.ಎಲ್.ಬಲರಾಮ ಆಚಾರ್ಯ

ಪುತ್ತೂರು: ಮಹಿಳೆಯರಿಗೆ ಆಭರಣಗಳೆಂದರೆ ಸಹಜವಾಗಿ ಮೋಹ ಹೆಚ್ಚು. ಅದರಲ್ಲೂ ವಜ್ರ ಎಂದರೆ ಕೈಗೆಟುಕದ್ದು ಎಂಬ ತಪ್ಪು ತಿಳಿವಳಿಕೆಯಿದೆ. ಆದರೆ ಪ್ರತೀ ಡೈಮಂಡ್ ಕ್ಯಾರೆಟ್‌ನ ಮೇಲೆ ವಿಶೇಷ ಆಕರ್ಷಕ ರಿಯಾಯಿತಿ ನೀಡುವ ಮೂಲಕ ಪುತ್ತೂರಿನ ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್‍ಸ್‌ನಲ್ಲಿ ಈ ಬಾರಿಯ ‘ಗ್ಲೊ ಫೆಸ್ಟ್’ಸಂಗ್ರಹ ಮಹಿಳೆಯರನ್ನು ಚಕಿತಗೊಳಿಸುವುದರಲ್ಲಿ ಸಂದೇಹವೇ ಇಲ್ಲ. ಇಂತಹ ಅವಕಾಶವನ್ನು ಗ್ರಾಹಕರು ಸದುಪಯೋಗ ಪಡಿಸುವ ನಿಟ್ಟಿನಲ್ಲಿ ಮುಂದಿನ ಒಂದು ತಿಂಗಳ ಅವಧಿಯಲ್ಲಿ ನಡೆಯುವ ವಾರ್ಷಿಕ ಹಬ್ಬ ಗ್ಲೊ ಫೆಸ್ಟ್‌ಗೆ ಡಿ.19ರಂದು ನಾಲ್ವರು ಮಹಿಳಾ ಸಾಧಕಿಯರು ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿದರು. ಪುತ್ತೂರು, ಸುಳ್ಯ, ಹಾಸನ ಹಾಗೂ ಕುಶಾಲನಗರಗಳಲ್ಲಿ ಮಳಿಗೆಗಳನ್ನು ಹೊಂದಿರುವ ಜಿ.ಎಲ್ ಆಚಾರ್ಯ ಜ್ಯುವೆಲ್ಸರ್‍ಸ್‌ನ ಪುತ್ತೂರು ಮಳಿಗೆಯಲ್ಲಿ ಗ್ಲೊ ಫೆಸ್ಟ್ ಆಯೋಜಿಸಿಕೊಳ್ಳಲಾಗಿದೆ.


ಆಭರಣ ಖರೀದಿಸಲು ಜಿ.ಎಲ್ ಮಳಿಗೆ ಪ್ರೇರಣೆ:
ವಿಶ್ವ ಕಲಾನಿಕೇತನ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್ಸ್ ಆಂಡ್ ಕಲ್ಚರಲ್‌ನ ವಿದುಷಿ ನಯನಾ ವಿ ರೈ ಅವರು ‘ಗ್ಲೊ ಫೆಸ್ಟ್’ ಉದ್ಘಾಟಿಸಿ ಮಾತನಾಡಿ ನಾನು1973 ರಲ್ಲಿ ಮದುವೆಯಾಗಿ ಬಂದಾಗ ಪುತ್ತೂರಿನಲ್ಲಿ ಪ್ರಪ್ರಥಮ ಬಾರಿಗೆ ಚಿನ್ನಾಭರಣ ಮಳಿಗೆ ಆರಂಭಿಸಿದ ಜಿ.ಎಲ್.ಆಚಾರ್ಯರವರ ಮಳಿಗೆಯಿಂದಲೇ ಸಣ್ಣ ಆಭರಣ ಖರೀದಿಸಿದ್ದೆ. ಆ ಸಣ್ಣ ಆಭರಣವೇ ಅದೃಷ್ಟವೇನೋ ಎಂಬಂತೆ ಮುಂದೆ ಇದೇ ಮಳಿಗೆಯಿಂದ ಅನೇಕ ಆಭರಣ ಖರೀಸುವಂತಾಯಿತು. ಯಾಕೆಂದರೆ ಗುಣಮಟ್ಟ ಮತ್ತು ಸೇವೆಯಿಂದ ಸಂಸ್ಥೆಯ ಮೇಲೆ ಪ್ರೀತಿ ಹುಟ್ಟಿದೆ. ನನ್ನ ಎಲ್ಲಾ ಸ್ನೇಹಿತರಿಗೆ, ಸಂಬಂಧಿಕರಿಗೆ ನಾನು ಖರೀದಿಸಿದ ಆಭರಣದ ಪರಿಚಯಿಸುವ ಮೂಲಕ ಸಂಸ್ಥೆಯ ಮೇಲೆ ಸಣ್ಣಮಟ್ಟದ ಪ್ರಚಾರವೂ ಆದಂತಾಗಿದೆ. ಇವತ್ತಿಗೂ ನಾನು ಆಭರಣಗಳ ಹೊಸ ಹೊಸ ವಿನ್ಯಾಸವನ್ನು ನೋಡಲು ಆಗಾಗೆ ಬಂದು ಹೋಗುವ ಪ್ರಕ್ರಿಯೆ ಮಾಡುತ್ತಿದ್ದೇನೆ. ಗ್ರಾಹಕರು ಈ ವಾರ್ಷಿಕ ಹಬ್ಬದ ಸದುಪಯೋಗ ಪಡೆಯುವಂತಾಗಲಿ ಎಂದರು.


ಆಭರಣ ಖರೀದಿ ಭಾವನಾತ್ಮಕ ಸಂಬಂಧ ಬೆಳೆಸುತ್ತದೆ:
ಕರ್ನಾಟಕ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆಯ ಮಾಜಿ ನೋಡೆಲ್ ಅಧಿಕಾರಿ, ದಿ ಸಿಕ್ಸ್ ಆಂಡ್ ಕೋ ಪುತ್ತೂರು ಮತ್ತು ಬಿ ವೆಲ್ ಫಾರ್ಮ ಮಂಗಳೂರು ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಅನಿಲ ದೀಪಕ್ ಶೆಟ್ಟಿ ಅವರು ಮಾತನಾಡಿ ಜಿ.ಎಲ್. ಕುಟುಂಬಕ್ಕೂ ನಮಗೂ ಅಪಾರ ಗೌರವ ಇದೆ. ಯಾಕೆಂದರೆ ನಾನೊಬ್ಬಳು ಯಕ್ಷಗಾನ ಕಲಾವಿದರ ಪುತ್ರಿಯಾಗಿದ್ದು, ನಮಗೆ ಅನ್ನ ಕೊಟ್ಟದ್ದು ಯಕ್ಷಗಾನವಾದರೆ. ಯಕ್ಷಗಾನಕ್ಕೆ ಕಲಾ ಪೋಷಕಕರಾಗಿ ಅನ್ನದಾತರಾಗಿದ್ದವರು ಜಿ.ಎಲ್. ಆಚಾರ್ಯ ಜ್ಯುವೆಲ್ಸ್ ಸಂಸ್ಥೆ ಎಂದ ಅವರು ನಮ್ಮ ಕುಟುಂಬದಲ್ಲಿ ಆಭರಣ ಖರೀದಿಗೆ ಜಿ.ಎಲ್ ಮೊದಲ ಆಯ್ಕೆಯಾಗಿದೆ. ಮದುವೆ ಸಂದರ್ಭ ಖರೀದಿಸುವ ಆಭರಣಗಳು ಸಂಸ್ಥೆಯೊಂದಿಗೆ ಭಾವನಾತ್ಮಕ ಸಂಬಂಧ ಬೆಳೆಸುತ್ತದೆ. ಅದೇ ರೀತಿ ಸಂಸ್ಥೆಯಲ್ಲಿ ಸಿಗುವ ನಗುಮೊಗದ ಸೇವೆ ಧನಾತ್ಮಕವನ್ನು ಬೆಳೆಸುತ್ತದೆ. ಈ ಎಲ್ಲಾ ಗುಣಗಳನ್ನು ಹೊಂದಿರುವ ಸಂಸ್ಥೆಯಿಂದ ಗ್ರಾಹಕರು ಇನ್ನಷ್ಟು ಆರಭರಣ ಖರೀದಿಸುವಂತಾಗಲಿ ಎಂದರು.

ಎಲ್ಲಾ ವರ್ಗದವರ ಆಯ್ಕೆಗೆ ಸೂಕ್ತ ಮಳಿಗೆ:
ಎಸ್‌ಡಿಪಿ ರೆಮಿಡಿಸ್ ಮತ್ತು ರಿಸರ್ಚ್ ಸೆಂಟರ್‌ನ ಮ್ಯಾನೇಜಿಂಗ್ ಪಾಲುದಾರೆ ಮತ್ತು ವಿವೇಕಾನಂದ ವಿದ್ಯಾವರ್ಧಕ ಸಂಘದ ಜೊತೆಕಾರ್ಯದರ್ಶಿ ರೂಪಲೇಖ ಅವರು ಮಾತನಾಡಿ ಪುತ್ತೂರಿನ ಆಸುಪಾಸಿನ ಮಹಿಳೆಯರಿಗೆ ಜಿ.ಎಲ್ ಆಚಾರ್ಯ ಜ್ಯುವೆಲ್ಲರ್‍ಸ್‌ನ ಗ್ಲೊ ಫೆಸ್ಟ್ ಮೂಲಕ ಆಭರಣಗಳ ಆಯ್ಕೆಗೆ ಅವಕಾಶ ಲಭಸಿದೆ. ನಾನು ಇಲ್ಲಿನ ಗ್ರಾಹಕಿಯಾಗಿ ವಜ್ರಾಭರಣಗಳ ಗುಣಮಟ್ಟದ ಮತ್ತು ಅದನ್ನು ಯಾವ ರೀತಿಯಲ್ಲಿ ಖರೀದಿಸಬಹುದೆಂಬ ಕುರಿತು ಮಾಹಿತಿಯನ್ನು ಇಲ್ಲಿಂದಲೇ ಪಡೆದಿದ್ದೇನೆ. ಇಲ್ಲಿ ಎಲ್ಲಾ ವರ್ಗದವರಿಗೂ ಸೂಕ್ತವಾದ ಆಭರಣ ಖರೀದಿಸಲು ಸಾಧ್ಯ.

ಗ್ರಾಹಕರು ಮತ್ತು ಸಿಬ್ಬಂದಿಗಳ ಹಾಗು ಮಾಲಕರ ನಡುವಿನ ಸಂಬಂಧ ಇಲ್ಲಿ ಉತ್ತಮವಾಗಿ ಮೂಡಿ ಬಂದಿದೆ. ಗ್ರಾಹಕನ ಅಂತಸ್ತನ್ನು ನೋಡದೆ ಎಲ್ಲರಿಗೂ ಸಮಾನ ಗೌರವ ಮತ್ತು ಗುಣಮಟ್ಟದ ಆಭರಣ ಸಂಸ್ಥೆಯನ್ನು ಎತ್ತರಕ್ಕೆ ಬೆಳೆಸಿದೆ. ಪುತ್ತೂರಿನ ಹೆಸರನ್ನು ಹತ್ತೂರಿಗೆ ಪರಿಚಯಿಸುವ ಕೆಲಸ ಮಾಡಿದ್ದು ಜಿ.ಎಲ್.ಸಂಸ್ಥೆ ಎಂದರು.


ಇವತ್ತಿಗೂ ವಿಶ್ವಾಸ, ಗುಣಮಟ್ಟವನ್ನು ಕಾಯ್ದುಕೊಂಡಿದೆ:
ಮೇಘ ಫ್ರುಟ್ಸ್ ಆಂಡ್ ಪ್ರೊಸೆಸಿಂಗ್ ಪ್ರೈವೆಟ್ ಲಿ.ನ ಕಾರ್ಯನಿರ್ವಾಹಕಅಧಿಕಾರಿ ರಂಜಿತಾ ಶಂಕರ್ ಅವರು ಮಾತನಾಡಿ ನಾನು ಬಹಳ ವರ್ಷದ ಹಿಂದೆಯೇ ಸಂಸ್ಥೆಯ ಗ್ರಾಹಕಿಯಾಗಿದ್ದೆ. ಈಗಲೂ ಗ್ರಾಹಕಿಯಾಗಿಯೂ ಮತ್ತು ವಿಶೇಷ ಸಂಬಂಧಿಕಳಾಗಿದ್ದೇನೆ. ಸಣ್ಣ ಪ್ರಾಯದಿಂದಲೇ ಚಿನ್ನಾಭರಣ ಖರೀದಿಗೆ ಜಿ.ಎಲ್.ಸಂಸ್ಥೆ ಬಿಟ್ಟರೆ ಬೇರೆನು ಗೊತ್ತೇ ಇರಲಿಲ್ಲ. ಅತ್ಯಂತ ಶುದ್ಧವಾದ ಗುಣಮಟ್ಟದ ಆರಭರಣ ಜಿ.ಎಲ್. ಮಳಿಗೆಯಲ್ಲಿ ಲಭ್ಯವಿತ್ತು. ಹಿಂದಿನಿಂದಲೇ ಗುಣಮಟ್ಟಕ್ಕೆ ಹೆಸರು ಪಡೆದ ಜಿ.ಎಲ್ ಆಚಾರ್ಯ ಜ್ಯುವೆಲ್ಸ್ ಸಂಸ್ಥೆ ಇವತ್ತಿಗೂ ತನ್ನ ಗುಣಮಟ್ಟವನ್ನು ಉಳಿಸಿಕೊಂಡು ಬಂದಿದ್ದರಿಂದ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿದೆ ಎಂದ ಅವರು 10 ವರ್ಷಗಳ ಹಿಂದೆ ವಜ್ರದ ಆಭರಣ ಖರೀದಿ ಮಾಡುವುದು ಎಲ್ಲರಿಗೂ ಕಷ್ಟ. ಪ್ರಸ್ತುತ ದಿನಗಳಲ್ಲಿ ಹೊಸ ವಿನ್ಯಾಸದಲ್ಲಿ ಆಭರಣ ತಕ್ಕ ಬೆಲೆಗೆ ಎಲ್ಲರಿಗೂ ಖರೀದಿಗೆ ಅವಕಾಶವಿದೆ. ಹಿಂದೆ ಒಂದು ನೆಕ್ಲೇಸ್ ತೆಗೆದು ಕೊಂಡರೆ ಎಲ್ಲಾ ಶುಭ ಕಾರ್ಯಕ್ಕೆ ಅದನ್ನೇ ಧರಿಸುವುವಂತಹ ಜಾಯಮಾನವಿತ್ತು.

ಇವತ್ತು ಹಾಗಲ್ಲ. ಆಯ ಸಮಾರಂಭಕ್ಕೆ ತಕ್ಕದಾದ ಶೈಲಿಯ ಆಭರಣ ಲಭ್ಯವಿದೆ. ಈ ಲಭ್ಯ ಆಭರಣ ಜಿ.ಎಲ್. ಆಚಾರ್ಯ ಜ್ಯುವೆಲ್ಸ್‌ನಲ್ಲಿ ವಿಭಿನ್ನ ಶೈಲಿಯಲ್ಲಿ ಇರುವುದು ವಿಶೇಷ ಎಂದರು. ಸಂಸ್ಥೆಯ ಮಾರ್ಕೆಟಿಂಗ್ ಮ್ಯಾನೇಜರ್ ಪ್ರಸಾದ್ ಎನ್.ಕೆ ಸ್ವಾಗತಿಸಿ, ವಂದಿಸಿದರು.

ಹೊಸತನ ಪರಿಚಸುವುದು ನಮ್ಮ ಉದ್ದೇಶ

ಜಿ.ಎಲ್. ಆಚಾರ್ಯ ಜ್ಯುವೆಲ್ಲರ್‍ಸ್‌ನ ಮಾಲಕ ಬಲರಾಮ ಆಚಾರ್ಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸುಮಾರು 8ವರ್ಷಗಳಿಂದ ಗ್ಲೊ ಫೆಸ್ಟ್ ಮಾಡುತ್ತಾ ಬಂದಿದ್ದೇವೆ. ಪ್ರತಿ ಗ್ಲೊ ಫೆಸ್ಟ್‌ನಲ್ಲಿ ಹೊಸತನದ ಪರಿಚಯ ಆಗಬೇಕೆಂಬುದು ನಮ್ಮ ಉದ್ದೇಶ. ಇದರಿಂದ ಗ್ರಾಹಕರಿಗೆ ಏನಾದರೂ ಒಂದು ಹೊಸತು ಆಯ್ಕೆಗೆ ಸಿಗಬೇಕು. ಅದೇ ರೀತಿ ಆರಂಭದಲ್ಲಿ ವಜ್ರಾಭರಣಗಳನ್ನು ಕಣ್ಣಿನಿಂದ ಪರೀಕ್ಷೆ ಮಾಡುವ ವ್ಯವಸ್ಥೆ. ಇವತ್ತು ಅತ್ಯಾಧುನಿಕ ಯಂತ್ರಗಳು ಬಂದಿವೆ. ಅದೇ ರೀತಿ ಗುಣಮಟ್ಟದ ಪ್ರಮಾಣಪತ್ರವೂ ನೀಡಲಾಗುತ್ತದೆ ಮತ್ತು ಹೊಸ ಹೊಸ ವಿನ್ಯಾಸಗಳಲ್ಲಿ ಹೊಸತನ ಬಂದಿದೆ ಎಂದರು. ಬಲರಾಮ ಆಚಾರ್ಯರವರ ಪತ್ನಿ ರಾಜಿ ಬಲರಾಮ ಆಚಾರ್ಯ ಹಾಗೂ ಪುತ್ರರಾದ ಸುದನ್ವ ಆಚಾರ್ಯ, ಲಕ್ಷ್ಮೀಕಾಂತ್ ಆಚಾರ್ಯ, ಸೊಸೆ ಮೇಘ ಸುದನ್ವ ಆಚಾರ್ಯ ಸಹಿತ ಗ್ರಾಹಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು.

ಗ್ಲೋ ಫೆಸ್ಟ್‌ನಲ್ಲಿ ವಿಶೇಷ ರಿಯಾಯಿತಿಗಳು
ಪ್ರದರ್ಶನ ಮತ್ತು ಮಾರಾಟದ ಅವಧಿಯಲ್ಲಿ ಗ್ರಾಹಕರು ತಾವು ಖರೀದಿಸುವ ವಜ್ರಾಭರಣಗಳಲ್ಲಿ ಪ್ರತೀ ಡೈಮಂಡ್ ಕ್ಯಾರೆಟ್‌ನ ಮೇಲೆ ರೂ.5000 ಮತ್ತು ಆಯ್ದೆ ವಜ್ರಾಭರಣ ಖರೀದಿಯಲ್ಲಿ ರೂ.7000 ವರೇಗೆ ರಿಯಾಯಿತಿ ಪಡೆಯಬಹುದು. ಜೊತೆಗೆ ಡಿಜಿಟಲ್ ಪಾವತಿಗೆ ಪ್ರತಿ ಕ್ಯಾರಟ್‌ಗೆ ರೂ. 500 ಹೆಚ್ಚುವರಿ ರಿಯಾಯಿತಿ ಪಡೆಯಬಹುದು. ಬಣ್ಣಗಳು, ಆಕಾರ ಮತ್ತು ಸ್ಪಷ್ಟತೆಯುಳ್ಳ ವಿಭಿನ್ನ ಶೈಲಿಯ ವಜ್ರಾಭರಣಗಳು ಲಭ್ಯವಿದೆ.

LEAVE A REPLY

Please enter your comment!
Please enter your name here