ಪುತ್ತೂರು: ಶ್ರೀ ದುರ್ಗಾ ಯುವಕವೃಂದ ಅರ್ಕ ಕೊಡಿಪಾಡಿ ಇದರ ಆಶ್ರಯದಲ್ಲಿ ದಿ.ಕಿಶೋರ್ ಕುಮಾರ್ ಅರ್ಕರವರ ಸ್ಮರಣಾರ್ಥ 65ಕೆ.ಜಿ. ವಿಭಾಗದ 48 ತಂಡಗಳ ಕಬಡ್ಡಿ ಪಂದ್ಯಾಟ ‘ಕಿಶೋರ್ ಟ್ರೋಪಿ – 2023’ ಫೆ.2ರಂದು ಅರ್ಕ ಶಾಲಾ ಮೈದಾನದಲ್ಲಿ ನಡೆಯಲಿದ್ದು, ಅದರ ಕರಪತ್ರವನ್ನು ಅರ್ಕ ಶ್ರೀ ಮಹಾದೇವಿ ಭಜನಾ ಮಂದಿರದಲ್ಲಿ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀಧರ್ ಪೂಜಾರಿ ಅರ್ಕ, ಅಭಿಜಿತ್ ನಾಯ್ಕ್ ಕೊಳಕಿಮಾರ್, ರಾಕೇಶ್ ಒಜಾಳ, ಮುರಳೀಧರ ಒಜಾಳ, ಜಯರಾಮ್ ಪೂಜಾರಿ ಕೊಳಕಿಮಾರ್, ತಿಲಕ್ ಅರ್ಕ, ಸಚಿನ್ ಅರ್ಕ, ಸಚ್ಚು ಅರ್ಕ, ಕಿಶನ್ ಅರ್ಕ, ನವೀನ್ ಪೂಜಾರಿ ಅರ್ಕ, ರಾಧಾಕೃಷ್ಣ ಪೂಜಾರಿ ಅರ್ಕ, ದೇವಪ್ಪ ಶೆಟ್ಟಿ ಅರ್ಕ, ನಾಗೇಶ್ ಪೂಜಾರಿ ಒಜಾಳ, ಶಿನಪ್ಪ ನಾಯ್ಕ್ ಅರ್ಕ, ರಾಕೇಶ್ ಗುತ್ತು, ಕೇಶವ ಸುವರ್ಣ ಪೆಲತ್ತಡಿ, ಅಮಿತಾ ಅರ್ಕ, ಜ್ಯೋತಿ ಅರ್ಕ ಮೊದಲಾದವರು ಉಪಸ್ಥಿತರಿದ್ದರು.