ದ.23:  ಮೈದಾನಿಮೂಲೆಗೆ ಪೇರೋಡ್ ಉಸ್ತಾದ್

0

ಪುತ್ತೂರು: ಮಿಸ್ಬಾಹುಸ್ಸುನ್ನ ಯೂತ್‌ಫ್ರೆಂಡ್ಸ್ ಉಜಿರೋಡಿ ಕುಂಬ್ರ ಇದರ 9 ನೇ ವಾರ್ಷಿಕೋತ್ಸವದ ಪ್ರಯುಕ್ತ ತಾಜುಲ್ ಉಲಮಾ ಹಾಗೂ ಇನ್ನಿತರ ಅಗಲಿದ ನೇತಾರರ ಅನುಸ್ಮರಣಾ ಸಂಗಮ ಹಾಗೂ ಏಕದಿನ ಮತಪ್ರಭಾಷಣವು ನಾಳೆ ( ದ.23 ) ರಂದು ಶುಕ್ರವಾರ ಮಗ್ರಿಬ್ ನಮಾಜಿನ ಬಳಿಕ ಮೈದಾನಿಮೂಲೆ ಮರ್‌ಹೂಂ ಆಟಕೋಯ ತಂಙಳ್ ವೇದಿಕೆಯಲ್ಲಿ ನಡೆಯಲಿದೆ.

ಕಾರ್ಯಕ್ರಮವನ್ನು ಮೈದಾನಿಮೂಲೆ ಜಮಾಅತ್ ಕಮಿಟಿ ಗೌರವಾಧ್ಯಕ್ಷ ಅಸ್ಸಯ್ಯದ್ ಮುಝಮ್ಮಿಲ್ ತಂಙಳ್ ಉದ್ಘಾಟಿಸಿ ದುಃವಾ ನೆರವೇರಿಸಲಿದ್ದಾರೆ. ಮುಖ್ಯ ಭಾಷಣಗಾರರಾಗಿ ಮೌಲಾನಾ ಪೇರೋಡ್ ಅಬ್ದುಲ್‌ರಹಿಮಾನ್ ಸಖಾಫಿಯವರು ಆಗಮಿಸಲಿದ್ದಾರೆ. ಬನ್ನೂರು ಜುಮಾ ಮಸೀದಿ ಖತೀಬ್ ಸಿರಾಜುದ್ದೀನ್ ಸಖಾಫಿ ಕನ್ಯಾನ ಪ್ರಾಸ್ತಾವಿಕ ಭಾಷಣ ಮಾಡಲಿದ್ದು, ಮೈದಾನಿಮೂಲೆ ಖತೀಬ್ ಅಬ್ದುಲ್‌ರಝಾಕ್ ಖಾಸಿಮಿ ಸ್ವಾಗತ ಭಾಷಣ ನೆರವೇರಿಸಲಿದ್ದಾರೆ. ಯೂಸುಫ್ ಹಾಜಿ ಕೈಕಾರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು ಮುಖ್ಯ ಅತಿಥಿಗಳಾಗಿ ಮೈದಾನಿಮೂಲೆ ಜಮಾತ್ ಕಮಿಟಿ ಅಧ್ಯಕ್ಷ ಕೆ ಪಿ ಮಹಮ್ಮದ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ಕಾರ್ಯಕ್ರಮದ ಪ್ರಯುಕ್ತ ಅತ್ಯಾಕರ್ಷಕ ಬುರ್ದಾ ಮಜ್ಲಿಸ್ ನಡೆಯಲಿದೆ ಎಂದು ಮುಸಬಾಹುಸ್ಸುನ್ನ ಯೂತ್‌ಫ್ರೆಂಡ್ಸ್ ಉಜಿರೋಡಿ ಇದರ ಪ್ರಕಟನೆ ತಿಳಿಸಿದೆ.

LEAVE A REPLY

Please enter your comment!
Please enter your name here