ಅಡ್ಯಾರಾಗೋಳಿ ಅಡ್ಯಲಾಯ ನೇಮೋತ್ಸವಕ್ಕೆ ಗೊನೆ ಮುಹೂರ್ತ

0

ಪುತ್ತೂರು : ದ.28 ರಂದು ಕಬಕದ ಅಡ್ಯಾರಾಗೋಳಿಯಲ್ಲಿ ಅಡ್ಯಲಾಯ ಮತ್ತು ಪರಿವಾರ ದೈವಗಳ ನೇಮೋತ್ಸವ ನಡೆಯಲಿದ್ದು ದ.21 ರಂದು ಗೊನೆ ಮುಹೂರ್ತ ನೆರವೇರಿತು.


ದೈವಸ್ಥಾನದ ಪ್ರಧಾನ ಅರ್ಚಕ ಶ್ರೀಧರ ಭಟ್ ಧಾರ್ಮಿಕ ವಿಧಿ ನೆರವೇರಿಸಿದರು. ಹಿರಿಯರಾದ ಕೃಷ್ಣ ಭಟ್ ಬೈಪದವು, ಅಡ್ಯಲಾಯ, ಸೇವಾ ಸಮಿತಿ ಅಧ್ಯಕ್ಷ ಸತೀಶ್ ರೈ ಡಿಂಬ್ರಿಗುತ್ತು, ಉಪಾಧ್ಯಕ್ಷ ಗೋಪಾಲ ಕೃಷ್ಣ ರೈ ಪುತ್ತೂರು ಟಯರ್ಸ್, ಪ್ರಧಾನ ಕಾರ್ಯದರ್ಶಿ ಲೋಕೇಶ್ ಶೆಟ್ಟಿ ಕಲ್ಲಂದಡ್ಕ, ಕೋಶಾಧಿಕಾರಿ ರಮೇಶ್ ವಿನಾಯಕ, ಕಾರ್ಯದರ್ಶಿ ರವೀಂದ್ರ ಕಲ್ಲಂದಡ್ಕ, ಸದಸ್ಯರುಗಳಾದ ದಿನೇಶ್ ಶ್ರೀ ಶಾಂತಿ, ನಾಗೇಶ್ ಅರ್ಕ, ರವೀಂದ್ರ ಕೆ ಪೋಳ್ಯ, ದೈವ ಪಾತ್ರಿ ಬಾಬು ಗೌಡ ನೆಕ್ಕರೆ, ಇಡ್ಕಿದು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ರಾಮ್ ಭಟ್ ನೀರಪಳಿಕೆ, ಶ್ರೀ ಮಹಾದೇವೀ ಉತ್ಸವ ಸಮಿತಿಯ ಮಾಜಿ ಅಧ್ಯಕ್ಷರುಗಳಾದ ಜಯರಾಮ್ ನೆಕ್ಕರೆ, ರಾಜಾ ವಿದ್ಯಾಪುರ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here