ಕಾಯಕಜೀವಿ ಪುರಸ್ಕಾರ-2022 ಪ್ರಶಸ್ತಿಗೆ ಸವಣೂರಿನ ಇ.ಎಸ್‌.ವಾಸುದೇವ ಇಡ್ಯಾಡಿ ಆಯ್ಕೆ :ಡಿ.23ರಂದು ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ

0

ಸವಣೂರು : ಸಮಾಜ ಸೇವೆ ಹಾಗೂ ನಾಟಿ ವೈದ್ಯಕ್ಷೇತ್ರದಲ್ಲಿ ಮಾಡಿರುವ ಸೇವೆಯನ್ನು ಪರಿಗಣಿಸಿ ,ಬೆಂಗಳೂರಿನ ರಂಗ ವಿಜಯಾ ಸಂಸ್ಥೆಯ ವತಿಯಿಂದ ಕೊಡಮಾಡುವ ಕಾಯಕಜೀವಿ ಪುರಸ್ಕಾರ-2022 ಪ್ರಶಸ್ತಿಗೆ ನಾಟಿ ವೈದ್ಯರಾದ ಸವಣೂರಿನ ವಾಸುದೇವ ಇಡ್ಯಾಡಿ ಆಯ್ಕೆಯಾಗಿದ್ದಾರೆ.

ವೈದ್ಯರತ್ನ ರಾಜ್ಯ ಪ್ರಶಸ್ತಿ ಪುರಸ್ಕೃತರೂ ಆಗಿರುವ ಇ.ಎಸ್.ವಾಸುದೇವ ಇಡ್ಯಾಡಿ ಅವರಿಗೆ ಈಗಾಗಲೇ ಹಲವು ಪ್ರಶಸ್ತಿಗಳು ಬಂದಿದ್ದು ,ಹಲವು ಕಡೆ ಗೌರವಾರ್ಪಣೆ ,ಸನ್ಮಾನ ನಡೆದಿದೆ.

ಕಾಯಕಜೀವಿ ಪುರಸ್ಕಾರ-2022 ಪ್ರಶಸ್ತಿ ಪ್ರದಾನ ಸಮಾರಂಭವು ಡಿ.23ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ ಎಂದು ರಂಗ ವಿಜಯಾ ಸಂಸ್ಥೆಯ ಅಧ್ಯಕ್ಷ ಮಾಲೂರು ವಿಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here