ಪದ್ಮಶ್ರೀ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕರ ಕುರಿತ ಡಾ|ನರೇಂದ್ರ ರೈ ದೇರ್ಲರವರ ಲೇಖನ ತುಮಕೂರು ವಿ.ವಿ ಕನ್ನಡ ಪಠ್ಯಕ್ಕೆ ಸೇರ್ಪಡೆ

0

ಪುತ್ತೂರು: ಪದ್ಮಶ್ರೀ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕರ ಕುರಿತು ಉಪನ್ಯಾಸಕ ಹಾಗೂ ಅಂಕಣಕಾರ ಡಾ|ನರೇಂದ್ರ ರೈ ದೇರ್ಲ ಬರೆದ ’ಸುರಂಗದ ನೀರಿನಲ್ಲಿ ತೇಲಿಬಂತು ಪದ್ಮಶ್ರೀ’ ಎಂಬ ಲೇಖನವು ತುಮಕೂರು ವಿಶ್ವವಿದ್ಯಾನಿಲಯದ ಕನ್ನಡ ಪಠ್ಯಕ್ಕೆ ಸೇರ್ಪಡೆಗೊಂಡಿದೆ. ವರ್ಷದ ಹಿಂದೆ ಡಾ. ದೇರ್ಲ ಅವರು ’ತರಂಗ’ ವಾರಪತ್ರಿಕೆಗೆ ಬರೆದ ಈ ವಿಶೇಷ ಲೇಖನವನ್ನು ತುಮಕೂರು ವಿಶ್ವವಿದ್ಯಾನಿಲಯದ ಪದವಿ ಪಠ್ಯದ ಆಯ್ಕೆ ಸಮಿತಿಯು ಬಿಎ, ಬಿಕಾಂ, ಬಿಎಸ್ಸಿ, ಬಿಬಿಎ ಪದವಿಯ ಎಲ್ಲಾ ವಿದ್ಯಾರ್ಥಿಗಳು ಓದುವ ಸ್ಪೂರ್ತಿಯ ಕಥನ ಮಾಲಿಕೆಯಲ್ಲಿ ಈ ಲೇಖನವನ್ನು ಒಂದಾಗಿ ಸೇರಿಸಿದೆ. ಸಾಲುಮರದ ತಿಮ್ಮಕ್ಕ, ಹಾಜಬ್ಬ, ಕಾಮೇಗೌಡ, ಸರಸ್ವತಿ ಮೊದಲಾದವರು ಸಾಧಿಸಿದ ಸಾಧನೆಯ ಸ್ಪೂರ್ತಿಯ ಕಥನ ಮಾಲಿಕೆಯಲ್ಲಿ ಮಹಾಲಿಂಗ ನಾಯಕರ ಲೇಖನವೂ ಒಂದಾಗಿದೆ. ಇದೇ ಲೇಖನವನ್ನು ಮಂಗಳೂರಿನ ಯೆನೇಪೊಯ ವಿಶ್ವವಿದ್ಯಾನಿಲಯವು ಪದವಿಯ ಪಠ್ಯಕ್ಕೆ ಆಯ್ಕೆ ಮಾಡಿದೆ.

LEAVE A REPLY

Please enter your comment!
Please enter your name here