ರಾಷ್ಟ್ರಮಟ್ಟದ ತ್ರೋಬಾಲ್ ಪಂದ್ಯಾಟ: ವಿವೇಕಾನಂದದ ಶ್ರೀಲಕ್ಷ್ಮೀ ಪ್ರಥಮ ; ಎಸ್.ಜಿ.ಎಫ್.ಐಗೆ ಆಯ್ಕೆ

0

ಪುತ್ತೂರು: ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದಲ್ಲಿ ಡಿ.24ರಿಂದ ಡಿ.27ರ ವರೆಗೆ ನಡೆದ ವಿದ್ಯಾಭಾರತಿ ರಾಷ್ಟ್ರಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ವಿವೇಕಾನಂದ ಸಿಬಿಎಸ್ಇ ವಿದ್ಯಾಸಂಸ್ಥೆಯ ಶ್ರೀ ಲಕ್ಷ್ಮೀ ಯವರು ಪ್ರಥಮ ಸ್ಥಾನ ಪಡೆದು ಎಸ್.ಜಿ.ಎಫ್.ಐಗೆ ಆಯ್ಕೆಯಾಗಿದ್ದಾರೆ.

ಇವರು ಮೇಗಿನಗುತ್ತು ನಿವಾಸಿ ರಾಜೇಶ್ ರೈ ಹಾಗೂ ಶ್ರೀಲತಾ ರಾಜೇಶ್ ರೈಯವರ ಪುತ್ರಿ. ಇವರಿಗೆ ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯ ದೈ.ಶಿ. ಶಿಕ್ಷಕ ರಾಷ್ಟ್ರಮಟ್ಟದ ತ್ರೋಬಾಲ್ ಆಟಗಾರ ಗೋಪಿನಾಥ್ ಹಾಗೂ ಶ್ರೀ ರಂಜಿನಿಯವರು ತರಬೇತಿ ನೀಡಿರುತ್ತಾರೆ.

ಇವರು ವಿವೇಕಾನಂದ ಸಿಬಿಎಸ್ಇ ವಿದ್ಯಾಸಂಸ್ಥೆಯ ಮುಖ್ಯ ಗುರು ಸಿಂಧು ವಿ.ಜಿ ಯವರ ಮತ್ತು ಶಾಲಾ ಶಿಕ್ಷಕರ ಸಹಕಾರದೊಂದಿಗೆ ದೈಹಿಕ ಶಿಕ್ಷಣ ಶಿಕ್ಷಕರಾದ ದೀಕ್ಷಿತ್ ಕೆ ಪಾಟಾಳಿಯವರು ಮತ್ತು ನವೀನ್ ಕುಮಾರ್ ಕೊಡ್ಯಡ್ಕರವರ ಮಾರ್ಗದರ್ಶನದಲ್ಲಿ ಪಂದ್ಯಾಟದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here