ನಿಡ್ಪಳ್ಳಿ ದೈವಗಳ ವರ್ಷಾವದಿ ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ.

0

 ನಿಡ್ಪಳ್ಳಿ; ಶ್ರೀ ಕಿನ್ನಿಮಾಣಿ ಪೂಮಾಣಿ ಪರಿವಾರ ದೈವಗಳ ದೈವಸ್ಥಾನ ಶ್ರೀ ಕ್ಷೇತ್ರ ನಿಡ್ಪಳ್ಳಿ ಇಲ್ಲಿಯ ವರ್ಷಾವದಿ ಜಾತ್ರೋತ್ಸವ ಜ.19 ರಿಂದ 25 ರವರೆಗೆ ನಡೆಯಲಿದ್ದು ಇದರ ಗೊನೆ ಮುಹೂರ್ತ ಕಾರ್ಯಕ್ರಮ ಜ.10 ರಂದು ನಡೆಯಿತು.
ಬೆಳಿಗ್ಗೆ ಗುತ್ತು ಚಾವಡಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಉಳ್ಳಾಕುಲು ಮೂಲ ಸ್ಥಾನದಲ್ಲಿ ಅಂಗಣಕ್ಕೆ ಹಾರೆ ಹಾಕಿ ಮುಹೂರ್ತ ಮಾಡಲಾಯಿತು. ನಂತರ ಬುಳೆನಡ್ಕ ವಿಷ್ಣು ಭಟ್ ರವರ ತೋಟಕ್ಕೆ ತೆರಳಿ ಗೊನೆ ಕಡಿಯಲಾಯಿತು.
 ಅನುವಂಶಿಕ ಆಡಳಿತ ಮೊಕ್ತೇಸರ ಪ್ರವೀಣ ಎನ್.ಆರಿಗ ನಿಡ್ಪಳ್ಳಿ ಗುತ್ತು, ಹಿರಿಯರಾದ ವಾಸುದೇವ ಭಟ್ ಮುಂಡೂರು, ಬಾರಿಕೆ ಮನೆಯವರು ಹಾಗೂ ಊರ ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here