ಕಿಲ್ಲೆ ಪ್ರತಿಷ್ಠಾನದಿಂದ ನ್ಯಾಯವಾದಿ ಮಹೇಶ್ ಕಜೆಯವರಿಗೆ ಗೌರವಾರ್ಪಣೆ

0

ಪುತ್ತೂರು: ಸ್ವಾತಂತ್ರ್ಯ ಹೋರಾಟಗಾರ ದೇಶಭಕ್ತ ಎನ್.ಎಸ್. ಕಿಲ್ಲೆ ಪ್ರತಿಷ್ಠಾನದ ವತಿಯಿಂದ ಖ್ಯಾತ ವಕೀಲರಾದ ಮಹೇಶ್ ಕಜೆಯವರನ್ನು ಅವರ ಸ್ವಗೃಹದಲ್ಲಿ ಇತ್ತೀಚೆಗೆ ಗೌರವಿಸಲಾಯಿತು. ಪ್ರತಿಷ್ಠಾನದ ಅಧ್ಯಕ್ಷ ಕಡಮಜಲು ಸುಭಾಸ್ ರೈಯವರು ಅಭಿನಂದನಾ ಪತ್ರ ನೀಡಿ ‘ವಕೀಲ ವೃತ್ತಿಯ ಜೊತೆಗೆ ಸಮಾಜಸೇವೆ ಮಾಡುತ್ತಿರುವ ನಿಮಗೆ ನೆಮ್ಮದಿಯ ಬದುಕು ಪ್ರಾಪ್ತವಾಗಲಿ. ಕಜೆಯವರ ಕಾರ್ಯಕ್ರಮ ನಿರೂಪಣೆ ಬಂಗಾರದ ಹೂವಿಗೆ ಪರಿಮಳ ಬಂದಂತಾಗುತ್ತದೆ’ ಎಂದು ಬಣ್ಣಿಸಿದರು. ದೀಪಿಕಾ ಮಹೇಶ್ ಕಜೆ, ಪ್ರೀತಿ ಸುಭಾಸ್ ರೈ ಕಡಮಜಲು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here