ಒಳಿತು ಮಾಡು ಮನುಷ್ಯ ತಂಡದಿಂದ ಕಿಟ್ ವಿತರಣೆ

0

ಪುತ್ತೂರು: ವಿಷನ್ ಸಹಾಯನಿಧಿ ಸೇವಾ ಟ್ರಸ್ಟ್‌ನ ಆಶ್ರಯದಲ್ಲಿ ಧನ್ವಂತರಿ ಕ್ಲಿನಿಕಲ್ ಲ್ಯಾಬೊರೇಟರಿ, ಜೆಸಿಐ ಪುತ್ತೂರು ಹಾಗೂ ಲಯನ್ಸ್ ಕ್ಲಬ್ ಪುತ್ತೂರು ಸಹಯೋಗದೊಂದಿಗೆ ನೇತ್ರದಾನ ನೋಂದಣಿ, ಉಚಿತ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡ ತಪಾಸಣಾ ಶಿಬಿರ ಹಾಗೂ ಊರ ಪರವೂರ ದಾನಿಗಳ ಸಹಕಾರದಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಅಶಕ್ತರಿಗೆ ನಿರಂತರವಾಗಿ ಆಹಾರ ಸಾಮಾಗ್ರಿಗಳ ಕಿಟ್ ನೀಡುವ 20ನೇ ಯೋಜನೆ ’ಒಳಿತು ಮಾಡು ಮನುಷ’ ಕಾರ್ಯಕ್ರಮ ಜ.30ರಂದು ಸೈನಿಕ ಭವನ ರಸ್ತೆಯಲ್ಲಿರುವ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು.

ಪುತ್ತೂರು ಜೆಸಿಐ ಅಧ್ಯಕ್ಷ ಸುಹಾಸ್ ಮರಿಕೆ ಮಾತನಾಡಿ ಸೇವೆ ಜೀವನದ ಶ್ರೇಷ್ಠವಾದ ಕೆಲಸ, ನಾವು ಸಮಾಜಕ್ಕೆ ಒತ್ತು ಕೊಟ್ಟಾಗ ಅದು ಸೇವೆ ಆಗುತ್ತದೆ. ನಾವು ನಿಸ್ವಾರ್ಥದಲ್ಲಿ ಸೇವೆ ಮಾಡಿದಾಗ ಅದು ಸಮಾಜಕ್ಕೆ ಸೇವೆಯಾಗುತ್ತದೆ. ಸೇವೆಯು ಜೀವನದ ಪರಮ ಧ್ಯೇಯ ಆಗಬೇಕು ಎಂದು ಶುಭಹಾರೈಸಿದರು. ಪುತ್ತೂರು ಲಯನ್ಸ್ ಕ್ಲಬ್‌ನ ಅಧ್ಯಕ್ಷ ಕೇಶವ ನಾಯ್ಕ್ ಮಾತನಾಡಿ, ಈ ಸಂಸ್ಥೆಯು ಉತ್ತಮವಾಗಿ ಬೆಳೆಯಲಿ, ಬಹಳ ಒಳ್ಳೆಯ ಕೆಲಸವನ್ನು ಮಾಡುತ್ತಿದ್ದಾರೆ. ಇನ್ನು ಒಳ್ಳೆಯ ಕೆಲಸ ಮಾಡಲಿ ಎಂದು ಹಾರೈಸಿ ಯಶಸ್ವಿನಿ ಯೋಜನೆಯ ಮಾಹಿತಿ ನೀಡಿದರು.

ರೂ. 60,೦೦೦ ಸಾವಿರ ಮೊತ್ತದ 60 ಆಹಾರ ಸಾಮಗ್ರಿಗಳ ಕಿಟ್ ವಿತರಣೆ: ಪ್ರತಿಭಾವಂತ ಹಗ್ಗಜಗ್ಗಾಟ ಆಟಗಾರ ಕರಾಯ ಗ್ರಾಮದ ಹರೀಶ್ ನಾಯ್ಕ್ ರವರಿಗೆ ಕಣ್ಣಿನ ಅರ್ನಿಯ ಚಿಕಿತ್ಸೆಗೆ 44ನೇ ಯೋಜನೆಯಾಗಿ ರೂ.10,೦೦೦ ಮೊತ್ತದ ಚೆಕ್ ವಿತರಣೆ, ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಬಡಗನ್ನೂರಿನ ಅನನ್ಯರವರಿಗೆ ಒಂದು ತಿಂಗಳಿಗೆ ಬೇಕಾಗಿರುವ 2750 ರೂಪಾಯಿಯ ಔಷಧಿ ವಿತರಣೆ, ಮಂಗಳೂರು ವಾಮಂಜೂರಿನ ಮಮತಾರವರು ಕಿಡ್ನಿ ಸಮಸ್ಯೆಯಿಂದ ನಿಧನರಾಗಿದ್ದು, ಅವರ ಕುಟುಂಬಕ್ಕೆ ರೂ.2500 ಸಾಂತ್ವನ ನಿಧಿಯ ಚೆಕ್ ವಿತರಣೆ ಹಾಗೂ ದಾನಿಗಳು ನೀಡಿದ ವಸ್ತ್ರವನ್ನು ಅವಶ್ಯಕತೆ ಇರುವವರಿಗೆ ನೀಡಲಾಯಿತು. ಹಾಗೂ 80 ಜನರಿಗೆ ಬಿಪಿ, ಶುಗರ್ ತಪಾಸಣೆ ಮಾಡಲಾಯಿತು.

ಜೇಸಿಐಯ ದಾಮೋದರ ಪಾಟಲಿ, ಮನೋಹರ್, ಲಯನ್ಸ್ ಕ್ಲಬ್‌ನ ಗಣೇಶ್ ಶೆಟ್ಟಿ, ಶಿವಪ್ರಸಾದ್ ಹಾಗೂ ಟ್ರಸ್ಟ್‌ನ ಪದಾಧಿಕಾರಿಗಳಾದ ಕಲಾವಿದ ಕೃಷ್ಣಪ್ಪ ಶಿವನಗರ, ಪ್ರಧಾನ ಕಾರ್ಯದರ್ಶಿ ಮೋಹನ್ ಸಿಂಹವನ, ಸ್ಥಾಪಕ ಅಧ್ಯಕ್ಷ ಚೇತನ್ ಕುಮಾರ್ ಪುತ್ತೂರು, ಅಧ್ಯಕ್ಷೆ ಶೋಭಾ ಮಡಿವಾಳ, ಮಾಲಿನಿ, ಅಕ್ಷಯ ಕುಲಾಲ್, ಪುಷ್ಪ ಬಂಡಾರಿ, ವಸಂತಿ, ಸರಸ್ವತಿ, ವಿಜಯ್ ಕುಮಾರ್ ಉಪಸ್ಥಿತರಿದ್ದರು. ಯಕ್ಷಿತಾ ಪ್ರಾರ್ಥಿಸಿದರು. ಶ್ರುತಿಕ ಸ್ವಾಗತಿಸಿ ಹರ್ಷಿತಾ ವಂದಿಸಿದರು. ಯೋಜನಾಧಿಕಾರಿ ಸೌಜನ್ಯ ಆರ್ಲಪದವು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here