ಶಾಂತಿಗೋಡು : ಕೈಂದಾಡಿ ಶಿರಾಡಿ ದೈವ, ಪರಿವಾರ ದೈವಗಳ ನೇಮೋತ್ಸವ – ಅನ್ನಸಂತರ್ಪಣೆ

0

ಪುತ್ತೂರು: ಶಾಂತಿಗೋಡು ಗ್ರಾಮದ ಕೈಂದಾಡಿಯ ಶಿರಾಡಿ ದೈವಸ್ಥಾನದಲ್ಲಿ ಶಿರಾಡಿ ದೈವ ಹಾಗೂ ಪರಿವಾರ ದೈವಗಳ ವಾರ್ಷಿಕ ನೇಮೋತ್ಸವ ಫೆ.5ರಂದು ನಡೆಯಿತು. ಫೆ.2ರಂದು ಶಾಂತಿಗೋಡು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ರಂಗಪೂಜೆ, ಫೆ.3ರಂದು ಶಾಂತಿಗೋಡು ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ರಂಗಪೂಜೆ, ಫೆ.4ರಂದು ಊರವರಿಂದ ಭಜನೆ, ಸರೋಳಿಯಿಂದ ಕಲ್ಕುಡ ಕಲ್ಲುರ್ಟಿ ದೈವಗಳ ಭಂಡಾರ, ಬಳಿಕ ಶಿರಾಡಿ ದೈವದ ಭಂಡಾರ ತೆಗೆದು ನೇಮೋತ್ಸವ ಫೆ.5ರಂದು ಬೆಳಿಗ್ಗೆಯಿಂದ ದೈವಗಳ ನೇಮೋತ್ಸವ ನಡೆಯಿತು. ಮಧ್ಯಾಹ್ನ ಸಾವಿರಾರು ಭಕ್ತಾದಿಗಳಿಗೆ ಅನ್ನಸಂತರ್ಪಣೆ ಜರಗಿತು. ರಾತ್ರಿ ಶಾಂತಿಗೋಡು ದೊಡ್ಡಮನೆಯಿಂದ ಮಾರಿ ಹೊರಡುವುದು ನಡೆಯಿತು. ಸ್ವಯಂಸೇವಕರು ಸಹಕರಿಸಿದರು. ದೈವಗಳ ಪಾತ್ರಿಗಳು, ಆಡಳಿತ ಮಂಡಳಿಯ ಅಧ್ಯಕ್ಷರು, ಸರ್ವಸದಸ್ಯರು ಹಾಗೂ ಊರ ಹತ್ತು ಸಮಸ್ತರು, ಭಕ್ತಾದಿಗಳು ಪಾಲ್ಗೊಂಡರು.

LEAVE A REPLY

Please enter your comment!
Please enter your name here