ಹನುಮಗಿರಿ ಬಿಯಂಯಸ್ ರಿಕ್ಷಾ ಚಾಲಕ ಮಾಲಕರ ಸಂಘದ ಉದ್ಘಾಟನೆ

0

ಪುತ್ತೂರು: ಈಶ್ವರಮಂಗಲ ಹನುಮಗಿರಿ ಬಿಯಂಯಸ್ ರಿಕ್ಷಾ ಚಾಲಕ ಮತ್ತು ಮಾಲಕರ ಸಂಘ(ರಿ.)ದ ಉದ್ಘಾಟನೆ ಅನುಗ್ರಹ ಹಾಲ್‌ನಲ್ಲಿ ನಡೆಯಿತು. ಮಂಗಳೂರು ಬಿಯಂಯಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯಿತು. ಸಂಘದ ಗೌರವಾಧ್ಯಕ್ಷ ರವಿಕಿರಣ್ ಶೆಟ್ಟಿ ಬೆದ್ರಾಡಿ ಮಾತನಾಡಿ ಈ ಸಂಘವು ಸಮಾಜಕ್ಕೇ ಮಾದರಿಯಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.

ಗೌರವ ಕಾನೂನು ಸಲಹೆಗಾರ ಶ್ರೀಕಾಂತ್ ಕಾನೂನಿನ ಮಾಹಿತಿ ನೀಡಿದರು. ಶ್ರೀಕಾಂತ್ ಪಿ.ಎಸ್., ಗೌರವ ಸಲಹೆಗಾರ ದಯಾನಂದ ಕೆಮ್ಮತ್ತಡ್ಕ, ಅಧ್ಯಕ್ಷ ಮಂಜುನಾಥ ರೈ, ಕಾರ್ಯದರ್ಶಿ ದೇವ್‌ದಾಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಿಎಂಎಸ್‌ನ ನೂತನ ಲೋಗೋವನ್ನು ಬಿಡುಗಡೆ ಮಾಡಲಾಯಿತು. ಬಾಲಪ್ಪ ಗೌಡ, ಹರೀಶ್ ಗೌಡ, ಹಮೀದ್ ಕುಕ್ಕಾಜೆ, ವಿಶ್ವನಾಥ ರೈ, ಬಾಸ್ಕರ ರೈ ಹೂನೀಡಿ ಅತಿಥಿಗಳನ್ನು ಸ್ವಾಗತಿಸಿದರು. 45 ಸದಸ್ಯರು ಉಪಸ್ಥಿತರಿದ್ದರು ಅಣ್ಣು ಮೇನಾಲ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here