ಮಾ.05: ಸಂಟ್ಯಾರು ಕಲ್ಲಕಟ್ಟದಲ್ಲಿ ರಾಜಗುಳಿಗ ದೈವದ ಕೋಲ, ಆಮಂತ್ರಣ ಪತ್ರಿಕೆ ಬಿಡುಗಡೆ

0

ಪುತ್ತೂರು: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸಂಟ್ಯಾರು ಜಂಕ್ಷನ್ ಬಳಿಯ ಕಲ್ಲಕಟ್ಟ ಶ್ರೀ ರಾಜಗುಳಿಗ ದೈವದ ಸಾನ್ನಿಧ್ಯದಲ್ಲಿ ಮಾ.05 ರಂದು ಶ್ರೀ ರಾಜಗುಳಿಗ ದೈವದ ಕೋಲವು ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆಯನ್ನು ಫೆ. 13 ರಂದು ಸಂಕ್ರಮಣದ ಪ್ರಯುಕ್ತ ತಂಬಿಲ ಸೇವೆ ನಡೆದು ಬಳಿಕ ದೈವ ನರ್ತಕರಿಗೆ ವೀಳ್ಯ ನೀಡುವುದರೊಂದಿಗೆ ಶ್ರೀ ರಾಜಗುಳಿಗ ದೈವದ ಕೋಲ ಹಾಗೂ ವೈದಿಕ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಯನ್ನು ಮಾಡಲಾಯಿತು.

ಈ ಸಂದರ್ಭದಲ್ಲಿ ಎಸ್.ಮಾಧವ ರೈ ಕುಂಬ್ರ, ನವೀನ್ ಸಾಲ್ಯಾನ್ ಕಿನ್ನಿಮಜಲು, ದೇವದಾಸ್ ಕುರಿಯ, ದಾದು ನಾಯ್ಕ, ವಿಶ್ವನಾಥ ಗೌಡ ಕಲ್ಲಕಟ್ಟ, ಜನಾರ್ದನ್ ಕೈರಾಪ್, ವಿಶ್ವನಾಥ ಪೂಜಾರಿ ಕಲ್ಲಕಟ್ಟ, ರಾಮಯ್ಯ ರೈ ಮಲಾರು, ಚೇತನ್ ಕಲ್ಲಕಟ್ಟ, ವಸಂತ ಗೌಡ ಕುರಿಯ, ನಿಹಾಲ್ ರೈ, ಉಪೇಂದ್ರ ಸಂಟ್ಯಾರು, ಸಂದೀಪ್ ಸಂಟ್ಯಾರು, ಯಶೋಧಾ ಮಣಿಯಾಣಿ ಕಲ್ಲಕಟ್ಟ, ಕಮಲ ಗುಂಡಿತರ್, ಸೇಸಮ್ಮ ಮಲಾರ್, ಮಹೇಶ್ ಕಿರಣ್ ಮಲಾರ್ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಹಾಗೂ ಊರಿನ ಭಕ್ತಾಧಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here