ಕುಂತೂರು: ಶಾಲಾ ಬಸ್-ಬುಲೆಟ್ ಡಿಕ್ಕಿ, ಸವಾರನಿಗೆ ಗಾಯ

0

ಪೆರಾಬೆ: ಖಾಸಗಿ ಶಾಲಾ ಬಸ್ ಹಾಗೂ ಬುಲೆಟ್ ಮೋಟಾರ್ ಸೈಕಲ್ ನಡುವೆ ಡಿಕ್ಕಿ ಸಂಭವಿಸಿ ಬುಲೆಟ್ ಸವಾರ ಗಾಯಗೊಂಡಿರುವ ಘಟನೆ ಉಪ್ಪಿನಂಗಡಿ-ಕಡಬ ರಾಜ್ಯ ಹೆದ್ದಾರಿಯ ಕುಂತೂರು ಗ್ರಾಮದ ಅಣ್ಣಡ್ಕ ಎಂಬಲ್ಲ ಫೆ.13ರಂದು ಬೆಳಿಗ್ಗೆ ನಡೆದಿದೆ.


ಘಟನೆಯಲ್ಲಿ ಗಾಯಗೊಂಡಿರುವ ಬುಲೆಟ್ ಸವಾರ ಪೆರಾಬೆ ನಿವಾಸಿ ಮುಹಮ್ಮದ್ ಅಜ್ಮಲ್‌ರವರು ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಹಮ್ಮದ್ ಅಜ್ಮಲ್ ಕಡಬದ ಕಳಾರದಲ್ಲಿರುವ ಸರ್ವಿಸ್ ಸ್ಟೇಷನ್‌ನಲ್ಲಿ ಕೆಲಸ ಮಾಡುತ್ತಿದ್ದು ಫೆ.13ರಂದು ಬೆಳಿಗ್ಗೆ ಬುಲೆಟ್( ಕೆಎ 21 ಎಕ್ಸ್ 8786)ನಲ್ಲಿ ಮನೆಯಿಂದ ಕಡಬಕ್ಕೆ ಹೋಗುತ್ತಿದ್ದ ವೇಳೆ ಕುಂತೂರು ಗ್ರಾಮದ ಅಣ್ಣಡ್ಕ ಎಂಬಲ್ಲಿ ಕಡಬ ಕಡೆಯಿಂದ ಆಲಂಕಾರಿಗೆ ಬರುತ್ತಿದ್ದ ಖಾಸಗಿ ಶಾಲಾ ಬಸ್ಸು (ಕೆಎ 21 ಸಿ 2128) ನಡುವೆ ಡಿಕ್ಕಿ ಸಂಭವಿಸಿದೆ. ಬಸ್ ಚಾಲಕ ಶಿವಪ್ಪ ಗೌಡ ಎಂಬವರು ತೀರಾ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಬಸ್ಸನ್ನು ಚಲಾಯಿಸಿಕೊಂಡು ಬಂದು ಯಾವುದೇ ಸೂಚನೆ ನೀಡದೇ ಏಕಾಏಕಿ ಬಸ್ಸನ್ನು ಬಲ ಬದಿಗೆ ತಿರುಗಿಸಿದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ. ಘಟನೆಯಲ್ಲಿ ಬುಲೆಟ್ ಸವಾರ ಮುಹಮ್ಮದ್ ಅಜ್ಮಾಲ್‌ರವರ ತಲೆ, ಕೈ ಮತ್ತು ಕಾಲುಗಳಿಗೆ ಗಾಯವಾಗಿದೆ. ಗಾಯಾಳು ಮುಹಮ್ಮದ್ ಅಜ್ಮಾಲ್‌ರವರ ತಂದೆ ಎಂ.ಹನೀಫ್ ಎಂಬವರು ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here