ಕೊಡಿಪಾಡಿ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಲಕ್ಷ ಪ್ರದಕ್ಷಿಣೆ ಸಂಕಲ್ಪಕ್ಕೆ ಚಾಲನೆ

0

ಪುತ್ತೂರು: ಕೊಡಿಪಾಡಿ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಧ್ವಜಸ್ಥಂಭ ಬ್ರಹ್ಮರಥ ಸಮರ್ಪಣೆ ಹಾಗೂ ಬ್ರಹ್ಮಕಲಶೋತ್ಸವದ ಯಶಸ್ವಿಗಾಗಿ ನಡೆಯಲಿರುವ ಲಕ್ಷ ಪ್ರದಕ್ಷಿಣೆ ಸಂಕಲ್ಪಕ್ಕೆ ಫೆ.19ರಂದು ಬೆಳಗ್ಗೆ 7 ಗಂಟೆಗೆ ಚಾಲನೆ ನೀಡಲಾಯಿತು.

ಕ್ಷೇತ್ರದಲ್ಲಿ 2024ರ ಮಾ. 20ರಿಂದ ಮಾ.25ರ ವರೆಗೆ ನಡೆಯಲಿರುವ ನೂತನ ಧ್ವಜಸ್ಥಭ ಭ್ರಹ್ಮರಥ ಸಮರ್ಪಣೆ ಹಾಗೂ ಬ್ರಹ್ಮಕಲಶೋತ್ಸವದ ಅಂಗವಾಗಿ ಪ್ರತೀ ತಿಂಗಳ ಮೂರನೇ ಆದಿತ್ಯವಾರ ಭಕ್ತಾದಿಗಳು ದೇವಸ್ಥಾನಕ್ಕೆ 108 ಸುತ್ತುಬರುವ ಮೂಲಕ ಲಕ್ಷ ಪ್ರದಕ್ಷಿಣೆ ಸಂಕಲ್ಪ ನೆರವೇರಲಿದ್ದು, ಬ್ರಹ್ಮಕಲಶದ ಸಂದರ್ಭದಲ್ಲಿ ಇದು ಸಂಪನ್ನಗೊಳ್ಳಲಿದೆ.

ಫೆ.19ರಂದು ಬೆಳಗ್ಗೆ 7 ಘಂಟೆಗೆ ದೇವರ ಪೂಜೆಯ ಬಳಿಕ ಕ್ಷೇತ್ರದ ಪ್ರಧಾನ ಅರ್ಚಕರಾದ ಕೃಷ್ಣ ಬಡಿಕಿಲ್ಲಾಯರವರು ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ಲಕ್ಷ ಪ್ರದಕ್ಷಿಣೆ ಸಂಕಲ್ಪ ಪ್ರಾರಂಭಗೊಂಡಿತು. ಊರಪರವೂರ ನೂರಾರು ಭಕ್ತಾದಿಗಳು ಲಕ್ಷ ಪ್ರದಕ್ಷಿಣೆ ಸಂಕಲ್ಪದಲ್ಲಿ ಪಾಲ್ಗೊಂಡರು.

LEAVE A REPLY

Please enter your comment!
Please enter your name here