ನೆಲ್ಲಿಕಟ್ಟೆ: ಸಂಶಯಾಸ್ಪದ ವ್ಯಕ್ತಿ ಪೊಲೀಸ್ ವಶಕ್ಕೊಪ್ಪಿಸಿದ ಸ್ಥಳೀಯರು

0

ಪುತ್ತೂರು: ನೆಲ್ಲಿಕಟ್ಟೆ ಬಳಿ ತಡ ರಾತ್ರಿ ಮನೆಯೊಂದರ ಆವರಣಕ್ಕೆ ಬಂದ ಅಪರಿಚಿತ ವ್ಯಕ್ತಿಯನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದ ಬಗ್ಗೆ ವರದಿಯಾಗಿದೆ.

ನೆಲ್ಲಿಕಟ್ಟೆ ನಿವಾಸಿ ಕಾಲೇಜೊಂದರ ಪ್ರಾಂಶುಪಾಲರ ಮನೆಯ ಆವರಣಕ್ಕೆ ತಡ ರಾತ್ರಿ ಅಪರಿಚಿತ ವ್ಯಕ್ತಿ ಬಂದಿದ್ದು, ಇದನ್ನು ಗಮನಿಸಿದ ಪ್ರಾಂಶುಪಾಲರು ಸ್ಥಳೀಯ ನಗರಸಭಾ ಸದಸ್ಯ ಶಕ್ತಿ ಸಿನ್ಹ ಅವರಿಗೆ ಕರೆ ಮಾಡಿದ್ದರು. ತಕ್ಷಣ ಶಕ್ತಿಸಿನ್ಹ ಅವರು ಪೊಲೀಸರಿಗೂ ಮಾಹಿತಿ ನೀಡಿದ್ದರು.

ಈ ನಡುವೆ ಅವರು ಕಾರಿನ ಹಿಂಬದಿಯಲ್ಲಿ ಅವಿತಿದ್ದ ಅಪರಿಚಿತ ವ್ಯಕ್ತಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿರುವುದಾಗಿ ತಿಳಿದು ಬಂದಿದೆ. ಘಟನೆ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

LEAVE A REPLY

Please enter your comment!
Please enter your name here