ತೆಂಕಿಲ ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ಗರಡಿಯಲ್ಲಿ ನೇಮೋತ್ಸವ ಸಂಪನ್ನ

0


ಪುತ್ತೂರು: ತೆಂಕಿಲ ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ಗರಡಿಯಲ್ಲಿ ಮೊಗೇರ್ಕಳ ಹಾಗು ಕೊರಗ ತನಿಯ ದೈವದ ನೇಮೋತ್ಸವ ಮಾ.೫ ರಂದು ಮಧ್ಯಾಹ್ನ ಸಂಪನ್ನ ಗೊಂಡಿತ್ತು.


ಮಾ.೩ ರಂದು ರಾತ್ರಿ ಗುಳಿಗ ದೈವದ ನೇಮೋತ್ಸವ, ಮಾ.೪ರಂದು ರಾತ್ರಿ ಮೊಗೇರ್ಕಳ ದೈವ, ತನ್ನಿಮಾನಿಗ ಗರಡಿ ನೇಮ ನಡೆಯಿತು. ಮಾ.೫ರಂದು ಬೆಳಿಗ್ಗೆ ಗಂಟೆ ೬ ರಿಂದ ಕೊರಗ ತನಿಯ ದೈವದ ನೇಮೋತ್ಸವ ಆರಂಭಗೊಂಡಿದ್ದು, ಮಧ್ಯಾಹ್ನದ ವೇಳೆ ಸಂಪನ್ನ ಗೊಂಡಿತ್ತು. ನೇಮೋತ್ಸವದ ಸಂದರ್ಭ ರಾತ್ರಿ ಶಾಸಕ ಸಂಜೀವ ಮಠಂದೂರು, ಹಿಂದು ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ, ನಗರಸಭಾ ಸ್ಥಳೀಯ ಸದಸ್ಯೆ ದೀಕ್ಷಾ ಪೈ, ಕಾಂಗ್ರೆಸ್ ಮುಖಂಡರಾದ ಅಶೋಕ್ ಕುಮಾರ್, ಕಾವು ಹೇಮನಾಥ ಶೆಟ್ಟಿ ಭೇಟಿ ನೀಡಿದರು. ಮಾ.೫ರಂದು ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರು ಕೊರಗ ತನಿಯ ದೈವದ ನೇಮೋತ್ಸವದಲ್ಲಿ ಪಾಲ್ಗೊಂಡರು.

LEAVE A REPLY

Please enter your comment!
Please enter your name here