ಕೆಮ್ಮಾರ: ರಿಕ್ಷಾ ಪಲ್ಟಿ-ಚಾಲಕ, ಪ್ರಯಾಣಿಕರಿಗೆ ಗಾಯ

0

ಪುತ್ತೂರು:ಬಜತ್ತೂರು ಗ್ರಾಮದ ಕಾಂಚನ ಸಮೀಪದ ಕೆಮ್ಮಾರ ಎಂಬಲ್ಲಿ ಆಟೋ ರಿಕ್ಷಾ ಪಲ್ಟಿಯಾಗಿ ಚಾಲಕ ಹಾಗೂ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಮಾ.12ರಂದು ನಡೆದಿದೆ.

ಕಾಂಚನ- ಕೆಮ್ಮಾರ ರಸ್ತೆಯ ಗೋಳಿತೊಟ್ಟುವಿನಿಂದ ಕೆಮ್ಮಾರ ಕಡೆಗೆ ಹೋಗುತ್ತಿದ್ದ ಆಟೋ ರಿಕ್ಷಾ(ಕೆಎ21ಸಿ1463)ವು ಕೆಮ್ಮಾರ ಮಸೀದಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಪ್ರಯಾಣಿಕರು ಗಾಯಗೊಂಡಿದ್ದಾರೆ.

ಚಾಲಕ ಅಬ್ಬಾಸ್ ಹಾಗೂ ಪ್ರಯಾಣಿಕರಾದ ಫಾತಿಮತ್ ಸನಾ ತೀವ್ರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಸ್ಯಮ್ಮ ಮಹಾವೀರ ಆಸ್ಪತ್ರೆ ಹಾಗೂ ಅಮೀದಾ, ಮೈಮೂನಾ, ಶರೀಪಮ್ಮಾರವರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಮೀದಾ ನೀಡಿದ ದೂರಿನಂತೆ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here