ಆಕಾಂಕ್ಷಾಗೆ ಬಿ.ಕಾಂ.ನಲ್ಲಿ ನಾಲ್ಕು ಚಿನ್ನದ ಪದಕ

0

ಉಪ್ಪಿನಂಗಡಿ: ಹಿರೇಬಂಡಾಡಿಯ ಎಚ್. ಆಕಾಂಕ್ಷ ಶೆಟ್ಟಿಯವರು ಮಂಗಳೂರು ವಿಶ್ವವಿದ್ಯಾನಿಲಯದ 41ನೇ ಘಟಿಕೋತ್ಸವದಲ್ಲಿ ಬಿ.ಕಾಂ. ಪದವಿಯಲ್ಲಿ ನಾಲ್ಕು ಚಿನ್ನದ ಪದಕಗಳನ್ನು ಪಡೆದಿದ್ದಾರೆ.

ಪ್ರಸ್ತುತ ಸಿ.ಎ. ಓದುತ್ತಿರುವ ಎಚ್. ಆಕಾಂಕ್ಷಾ ಶೆಟ್ಟಿಯವರು ಹಿರೇಬಂಡಾಡಿಯ ಹೆನ್ನಾಳದ ಕೃಷಿಕ ದಂಪತಿ ತನುಜ್‌ಕುಮಾರ್ ಶೆಟ್ಟಿ ಹಾಗೂ ಗೀತಾ ಟಿ. ಶೆಟ್ಟಿ ದಂಪತಿಯ ಪುತ್ರಿಯಾಗಿದ್ದು, ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಬಿ.ಕಾಂ. ವಿದ್ಯಾರ್ಥಿನಿಯಾಗಿದ್ದು, ತನ್ನ ಪದವಿ ಪೂರ್ವ ಶಿಕ್ಷಣವನ್ನು ರಾಮಕುಂಜದ ರಾಮಕುಂಜೇಶ್ವರ ಕಾಲೇಜಿನಲ್ಲಿ ಪಡೆದು ಕಾಲೇಜಿಗೆ ಟಾಪರ್ ಆಗಿದ್ದರು.

LEAVE A REPLY

Please enter your comment!
Please enter your name here