ಹಾವಿನ ಕಡಿತದಿಂದ ತಾಯಿಯನ್ನು ರಕ್ಷಿಸಿದ ಶ್ರಮ್ಯಾ ರೈಯವರಿಗೆ ರೋಟರಿ ಸಿಟಿಯಿಂದ ಸನ್ಮಾನ

0

ಪುತ್ತೂರು: ಇತ್ತೀಚೆಗೆ ಹಾವಿನ ಕಡಿತದಿಂದ ತನ್ನ ತಾಯಿಯನ್ನ ರಕ್ಷಿಸಿದ ಶ್ರಮ್ಯಾ ರೈಯವರನ್ನು ರೋಟರಿ ಕ್ಲಬ್ ಪುತ್ತೂರು ಸಿಟಿ ವತಿಯಿಂದ ಸನ್ಮಾನಿಸಲಾಯಿತು. ದ.ಕ. ಜಿಲ್ಲಾ ನಿರ್ಮಿತಿ ಕೇಂದ್ರದ ಪ್ರಾಜೆಕ್ಟ್ ನಿರ್ದೇಶಕರಾದ ರಾಜೇಂದ್ರ ಕಲ್ಬಾವಿರವರು ಸನ್ಮಾನ ಕಾರ್ಯಕ್ರಮ ನೆರವೇರಿಸಿದರು.


ಈ ಸಂದರ್ಭದಲ್ಲಿ ರೋಟರಿ ಸಿಟಿ ಅಧ್ಯಕ್ಷ ಪ್ರಶಾಂತ್ ಶೆಣೈ, ಕಾರ್ಯದರ್ಶಿ ಜಯಗುರು ಆಚಾರ್, ಮಾಜಿ ಅಧ್ಯಕ್ಷ ಪ್ರಮೋದ್ ಮಲ್ಲಾರ, ನಿಯೋಜಿತ ಅಧ್ಯಕ್ಷ ಗ್ರೇಸಿ ಗೊನ್ಸಾಲ್ವಿಸ್ ಸಹಿತ ರೋಟರಿ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here