ಅಕ್ಷಯ ಮೋಟಾರ್‍ಸ್‌ನಿಂದ ಹೀರೋ ಎಕ್ಸ್‌ಪ್ಲಸ್ ದ್ವಿಚಕ್ರ ವಾಹನ ರ್‍ಯಾಲಿ – ಗ್ರಾಹಕರ ಸಮ್ಮಿಲನ

0

ಪುತ್ತೂರು: ಭಾರತದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ‘ಹೀರೋ’ ತನ್ನ ಪ್ರಾಬಲ್ಯವನ್ನು ಮುಂದುವರಿಸಿದಂತೆ ಪುತ್ತೂರಿನಲ್ಲಿ ಹೀರೋ ಶೋ ರೂಮ್ ಅಕ್ಷಯ್ ಮೋಟಾರ್‍ಸ್‌ನಲ್ಲಿ ಹೀರೋ ಎಕ್ಸ್‌ಪ್ಲಸ್ ದ್ವಿಚಕ್ರ ವಾಹನದ ರ್‍ಯಾಲಿ ಮತ್ತು ಗ್ರಾಹಕರ ಸಮ್ಮಿಲನ ಕಾರ್ಯಕ್ರಮ ಮಾ.22ರಂದು ನಡೆಯಿತು.


ಪುತ್ತೂರು ಅಕ್ಷಯ್ ಮೋಟಾರ್‍ಸ್‌ನಲ್ಲಿ ನೂತನ ‘ಎಕ್ಸ್‌ಪ್ಲಸ್ 200-3’ ವರ್ಷನ್ ಅನ್ನು ಮೊದಲ ಗ್ರಾಹಕರಿಗೆ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಇದೇ ಸಂದಭದಲ್ಲಿ ಹೀರೋ ಎಕ್ಸ್‌ಒಮ್ ಸ್ಕೂಟರ್ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಕೆಎಸ್ಸಾರ್ಟಿಸಿ ಅಧಿಕಾರಿ ವೆಂಕಟ್ರಮಣ ಭಟ್, ಅಂಬಿಕಾ ವಿದ್ಯಾ ಸಂಸ್ಥೆಯ ರಾಮಚಂದ್ರ ಭಟ್, ಹೀರೋ ಕಂಪೆನಿಯ ಪ್ರಸಾದ್ ಮತ್ತು ತೋಮಸ್, ಅಕ್ಷಯ್ ಮೋಟಾರ್‍ಸ್‌ನ ಮಾಲಕ ಕೆ.ಶ್ಯಾಮ ಭಟ್, ಮಿತ್ತೂರಿನಲ್ಲಿ ಗ್ರಾಹಕರ ಸಮ್ಮಿಲ ಕಾರ್ಯಕ್ರಮದ ಸ್ಥಳವಕಾಶ ಮಾಡಿಕೊಟ್ಟ ಕಲ್ಸರ್ಪೆ ಕೇಶವ ಭಟ್ ಉಪಸ್ಥಿತರಿದ್ದರು. ಅಕ್ಷಯ್ ಮೋಟಾರ್‍ಸ್‌ನ ಕೃಷ್ಣಮೂರ್ತಿ ಮತ್ತು ಶಿವಪ್ರಸಾದ್ ಸಹೋದರರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here