ಬಜಕರೆ: ಶಾಲಾ ಸಂಪರ್ಕ ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ

0

ಮರ್ದಾಳ: ಕಡಬ ತಾಲೂಕಿನ ಕೆರ್ಮಾಯಿ-ಬೊಳಂತ್ಯಡ್ಕ, ಬರಮೇಲು, ಐತ್ತೂರುಬೈಲು, ನೇಲಡ್ಕ, ಎನ್.ಕೂಪ್ ಸಿಆರ್‌ಸಿ ಸಂಪರ್ಕ ರಸ್ತೆಯ ಬಜಕರೆ ಎಂಬಲ್ಲಿ ನಿರ್ಮಾಣಗೊಳ್ಳಲಿರುವ ಶಾಲಾ ಸಂಪರ್ಕ ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು.


ನಿವೃತ್ತ ರೈಲ್ವೆ ಉದ್ಯೋಗಿ ಪೂವಪ್ಪ ಗೌಡರವರು ತೆಂಗಿನಕಾಯಿ ಒಡೆಯುವ ಮೂಲಕ ಶಂಕುಸ್ಥಾಪನೆ ನೆರವೇರಿಸಿದರು. ಬಿಜೆಪಿ ಜಿಲ್ಲಾ ಪ್ರಶಿಕ್ಷಣ ಪ್ರಕೋಷ್ಟದ ಸಂಚಾಲಕರಾದ ಕೃಷ್ಣ ಶೆಟ್ಟಿ ಕಡಬ, ವಾಡ್ಯಪ್ಪ ಗೌಡ, ಮೇದಪ್ಪ ಗೌಡ, ರಮೇಶ್ ಕಲ್ಪುರೆ, ಜನಾರ್ದನ ಗೌಡ ಪುತ್ತಿಲ, ಹರೀಶ್ ಕೊಡಂದೂರು, ಈರೇಶ್, ಗಂಗಾಧರ ರೈ, ಮುತ್ತಪ್ಪ ಅಜಿಲ ಮತ್ತಿತರರು ಉಪಸ್ಥಿತರಿದ್ದರು. ಶಾಲಾ ಸಂಪರ್ಕ ಸೇತುವೆ ನಿರ್ಮಾಣಕ್ಕೆ ಅನುದಾನ ಮಂಜೂರುಗೊಳಿಸಲು ಪ್ರಯತ್ನಿಸಿದ ಕೃಷ್ಣ ಶೆಟ್ಟಿ ಕಡಬ, ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ, ವಾಡ್ಯಪ್ಪ ಗೌಡ ಎರ್ಮಾಯಿಲ್, ಮೇದಪ್ಪ ಗೌಡ ಡೆಪ್ಪುಣಿಯವರಿಗೆ ಸಭೆಯಲ್ಲಿ ಅಭಿನಂದನೆ ಸಲ್ಲಿಸಲಾಯಿತು. ಅಲ್ಲದೇ ನಾಗೇಶ್ ಬರಮೇಲು, ಗಣೇಶ್ ಐತ್ತೂರು, ಸೂರ್ಯನಾರಾಯಣ ಭಟ್, ದಾಸಪ್ಪ ಪೂಜಾರಿ, ಲೋಕೇಶ್ ಮತ್ತಿತರರು ಅನುದಾನ ಮಂಜೂರುಗೊಳಿಸುವಲ್ಲಿ ಪ್ರಯತ್ನಿಸಿದ್ದರು. ಲೋಕೇಶ್ ಸ್ವಾಗತಿಸಿ, ವಂದಿಸಿದರು. ಮುತ್ತಪ್ಪ ಅಜಿಲ ಪ್ರಾರ್ಥಿಸಿದರು.

LEAVE A REPLY

Please enter your comment!
Please enter your name here