ಪುತ್ತೂರು ಜಾತ್ರೆಗೆ ದೇವಳದ ಗದ್ದೆಯಲ್ಲಿ ತಾತ್ಕಾಲಿಕ ಅಂಗಡಿ ಏಲಂಗೆ ಸ್ಥಳ ಮಾರ್ಕಿಂಗ್

0

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೆಯ ಸಂದರ್ಭ ದೇವಳದ ಗದ್ದೆಯಲ್ಲಿ ತಾತ್ಕಾಲಿಕವಾಗಿ ಅಂಗಡಿಗಳ ಸ್ಥಾಪನೆಗೆ ಏಲಂ ಪ್ರಕ್ರಿಯೆಗೆ ಸ್ಥಳ ಮಾರ್ಕಿಂಗ್ ಮಾಡುವ ಕಾರ್ಯ ಎ.2ರಂದು ನಡೆಯಿತು.

ದೇವಳದ ವಾಸ್ತು ಇಂಜಿನಿಯರ್ ಪಿ.ಜಿ.ಜಗನ್ನಿವಾಸ ರಾವ್ ಮತ್ತು ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿಯವರು ಅಂಗಡಿಗಳ ಸಂಖ್ಯೆ ಮತ್ತು ಅದರ ಅಳತೆಗಳನ್ನೊಳಗೊಂಡ ನಕಾಶೆಯನ್ನು ಸಿದ್ಧಗೊಳಿಸಿ ಮಾರ್ಕಿಂಗ್ ಮಾಡಿಸುವ ಕಾರ್ಯಕ್ಕೆ ಚಾಲನೆ ನೀಡಿದರು.

ದೇವಳದ ನಿತ್ಯ ಚಾಕ್ರಿಯವರು ಮಾರ್ಕಿಂಗ್ ಕಾರ್ಯ ಮಾಡಿದರು.

LEAVE A REPLY

Please enter your comment!
Please enter your name here