ನಾಪತ್ತೆಯಾಗಿದ್ದ ಪುಳುವಾರು ಶಿವಪ್ಪ ಗೌಡರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

0

ಪುತ್ತೂರು:ಮನೆಯಲ್ಲಿ ಒಬ್ಬಂಟಿಯಾಗಿ ವಾಸವಾಗಿದ್ದು ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಚಿಕ್ಕಮುಡ್ನೂರು ಗ್ರಾಮದ ಗುತ್ತಿಕಲ್ಲು ಎಂಬಲ್ಲಿಂದ ವರದಿಯಾಗಿದೆ.


ಚಿಕ್ಕಮುಡ್ನೂರು ಗ್ರಾಮದ ಪುಳುವಾರು ಬಾಬು ಗೌಡರ ಪುತ್ರ ಶಿವಪ್ಪ ಗೌಡ(46ವ.)ಮೃತಪಟ್ಟವರು.


ಶಿವಪ್ಪ ಗೌಡರಿಗೆ ಸುಮಾರು 12 ವರ್ಷಗಳ ಹಿಂದೆ ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ಚೆನ್ನಪ್ಪ ಗೌಡರ ಪುತ್ರಿ ಸುನೀತಾರೆಂದಿಗೆ ಮದುವೆಯಾಗಿತ್ತು.ಮದುವೆಯಾದ ಬಳಿಕ ಸುಮಾರು 8 ವರ್ಷಗಳ ಕಾಲ ಹೆಂಡತಿ ಮಕ್ಕಳೊಂದಿಗೆ, ಅಣ್ಣ ತಿಮ್ಮಪ್ಪ ಗೌಡರ ಮನೆಯ ಬಳಿ ಪ್ರತ್ಯೇಕ ಮನೆ ಮಾಡಿ ವಾಸವಾಗಿದ್ದು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.ಸುಮಾರು 4 ವರ್ಷಗಳ ಹಿಂದೆ ಶಿವಪ್ಪ ಗೌಡ ಮತ್ತು ಅವರ ಪತ್ನಿ ನಡುವೆ ಮನಸ್ತಾಪ ಉಂಟಾಗಿ ಸುನಿತಾರವರ ಮಕ್ಕಳೊಂದಿಗೆ ತವರು ಮನೆಗೆ ಹೋಗಿದ್ದರು.ತಮ್ಮ ಶಿವಪ್ಪ ಗೌಡ ಕೂಡಾ ಕೆಲ ಕಾಲ ಹೆಂಡತಿ ಮನೆಯಲ್ಲಿ ಇದ್ದು ಬಳಿಕ ಅಲ್ಲಿ ಜಗಳ ಮಾಡಿ ಆ ಬಳಿಕ ಅಲ್ಲಿಗೆ ಹೋಗುವುದನ್ನು ನಿಲ್ಲಿಸಿ ತನ್ನ ಊರಿನಲ್ಲಿಯೇ ಇರುತ್ತಿದ. ಊರಿನಲ್ಲಿ ಕೂಲಿ ಕೆಲಸ ಮಾಡುತ್ತಾ ತನ್ನ ಮನೆಯಲ್ಲಿ ಒಬ್ಬನೇ ಇರುತ್ತಿದ್ದ ಆತ ಪರಿಚಯದ ಬೀರಿಗ ನಿವಾಸಿಯೊಬ್ಬರ ಮನೆಗೆ ಹೋಗಿ ಬರುತ್ತಿದ್ದು ಅದೇ ಮನೆಯಿಂದ ಮಾ.17ರಂದು ಕಾಣೆಯಾಗಿರುವ ಬಗ್ಗೆ ಮಾಹಿತಿ ನೀಡಿದ್ದರು.

ತಮ್ಮನ ಬಗ್ಗೆ ಹುಡುಕಾಡಿ ಸಿಗದೇ ಇದ್ದುದರಿಂದ ಏ.1ರಂದು ತಿಮ್ಮಪ್ಪ ಗೌಡರು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ `ತಮ್ಮ ನಾಪತ್ತೆ’ ದೂರನ್ನು ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಏ.3ರಂದು ಚಿಕ್ಕಮುಡ್ನೂರು ಗ್ರಾಮದ ಗುತ್ತಿಕಲ್ಲು ಎಂಬಲ್ಲಿ ಗೇರು ಮರದ ಕೊಂಬೆಗೆ ಲುಂಗಿಯನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಕೊಂಡು ಮೃತ ಪಟ್ಟ ಸ್ಥಿತಿಯಲ್ಲಿ ತಮ್ಮ ಶಿವಪ್ಪ ಗೌಡರ ಮೃತದೇಹ ಕೊಳೆತ ಸ್ದಿತಿಯಲ್ಲಿ ಪತ್ತೆಯಾಗಿದೆ.ಮೃತರ ಅಣ್ಣ ತಿಮ್ಮಪ್ಪ ಗೌಡರು ನೀಡಿದ ದೂರಿನಂತೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here