ಕಾರಿನೊಳಗೆ ಸಿಲುಕಿಕೊಂಡ ಹೆಬ್ಬಾವು – ಉರಗ ಪ್ರೇಮಿ ತೇಜಸ್ ರವರಿಂದ  45 ನಿಮಿಷದ ಕಾರ್ಯಾಚರಣೆ ಬಳಿಕ ರಕ್ಷಣೆ !

0

ಪುತ್ತೂರು: ಕೋಳಿ ಗೂಡಿನ ಬಳಿಯಿದ್ದ ಹೆಬ್ಬಾವೊಂದು  ಪಕ್ಕದಲ್ಲಿದ್ದ  ಕಾರಿನೊಳಗೆ ಸೇರಿ ಸಿಲುಕಿಕೊಂಡಿರುವುದನ್ನು ಉರಗ ಪ್ರೇಮಿ ತೇಜಸ್ ಎಂಬವರು ರಕ್ಷಣೆ ಮಾಡಿದ ಘಟನೆ ಸೇಡಿಯಾಪಿನಲ್ಲಿ ನಡೆದ ಬಗ್ಗೆ ವರದಿಯಾಗಿದೆ.

ಸೇಡಿಯಾಪು ತೇಜಸ್ ಗೌಡ ಎಂಬವರ ಮನೆಯ ಕೋಳಿಗೂಡಿನ ಬಳಿಯಿದ್ದ ಹೆಬ್ಬಾವೊಂದು ಮನೆಮಂದಿಯನ್ನು ನೋಡಿ ಪಕ್ಕದಲ್ಲಿ ಕಾರಿನ ಬಾನೆಟ್ ಒಳಗೆ ಸೇರಿಕೊಂಡು ಸಿಲುಕಿಗೊಂಡಿತ್ತು. ಬಳಿಕ ಉಗರ ಪ್ರೇಮಿ ತೇಜಸ್ ಅವರು ಬಂದು ಹಾವಿನ ರಕ್ಷಣೆಗೆ ಪ್ರಯತ್ನಪಟ್ಟರು. ಬಳಿಕ ಕಾರು ಎಲೆಕ್ಟ್ರೀಷಿಯನ್ ಬಂದು ಕಾರಿನ ಬ್ಯಾಟರಿ ಕಳಚಿದ ಬಳಿಕ ತೇಜಸ್ ಅವರು 45 ನಿಮಿಷಗಳ ಕಾರ್ಯಾಚರಣೆಯಲ್ಲಿ ಹಾವನ್ನು ರಕ್ಷಣೆ ಮಾಡಿ ರಕ್ಷಿತಾರಣ್ಯಕ್ಕೆ ಬಿಟ್ಟಿದ್ದರು.

LEAVE A REPLY

Please enter your comment!
Please enter your name here