ಎ.15 ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ರುದ್ರಪಾರಾಯಣ, ಸೀಯಾಳಾಭಿಷೇಕ

0

ಬೆಟ್ಟಂಪಾಡಿ: ವಿಷು ಹಬ್ಬದ ಸಂದರ್ಭದಲ್ಲಿ ವರುಣನ ಕೃಪೆಗಾಗಿ ರುದ್ರಪಾರಾಯಣ ಮತ್ತು ಶ್ರೀ ಮಹಾಲಿಂಗೇಶ್ವರ ದೇವರಿಗೆ ಸೀಯಾಳಾಭಿಷೇಕ ಏ.15ರಂದು ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ನಡೆಯಲಿದೆ. ಪ್ರತೀ ವರ್ಷ ಕ್ಷೇತ್ರದಲ್ಲಿ ಈ ಪುಣ್ಯಪ್ರದ ಕಾರ್ಯಕ್ರಮ ನೆರವೇರುತ್ತಿದ್ದು, ವರುಣ ದೇವರು ಸಂತುಷ್ಟನಾಗಿ ಭೂಮಿಗೆ ವರ್ಷಧಾರೆ ಕಲ್ಪಿಸಿಕೊಡುತ್ತಾನೆ ಎಂಬ ನಂಬಿಕೆ ಅತೀವವಾಗಿದೆ. ಈ ಹಿನ್ನೆಲೆಯಲ್ಲಿ ಊರ ಪರವೂರ ಭಕ್ತಾಭಿಮಾನಿಗಳು ಸೀಯಾಳ ಸಮರ್ಪಿಸಿ ದೇವರನ್ನು ಪ್ರಸನ್ನೀಕರಿಸುತ್ತಾರೆ. ಈ ಬಾರಿ ವಿಷು ಸಂಕ್ರಮಣದ ವಿಶೇಷ ದಿನವೇ ಕ್ಷೇತ್ರದಲ್ಲಿ ಸೀಯಾಳಾಭಿಷೇಕ ನಡೆಯುತ್ತಿದೆ. ಅದರ ಜೊತೆ ನೂರಾರು ರುದ್ರಾಧ್ಯಾಯಿಗಳಿಂದ ರುದ್ರಪಾರಾಯಣವೂ ನಡೆಯುತ್ತದೆ.


ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಳದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here