ಎ.18: ಕೆ.ವಿ.ಶೆಣೈ ಪೆಟ್ರೋಲ್ ಪಂಪ್ ಆವರಣದಲ್ಲಿ ಸಂಗೀತ ರಸಮಂಜರಿ

0

ಪುತ್ತೂರು: ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ. ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯುವ ಅವಭೃತ ಸವಾರಿಯ ಹಿನ್ನೆಲೆಯಲ್ಲಿ ಪುತ್ತೂರು ಕೆ.ವಿ.ಶೆಣೈ ಪೆಟ್ರೋಲ್ ಪಂಪ್ ಆವರಣದಲ್ಲಿ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.

ಸಂಜೆ 5 ಗಂಟೆಗೆ ಪೆಟ್ರೋಲ್ ಪಂಪ್ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಝೀ ಕನ್ನಡ ವಾಹಿನಿಯ ಸರೆಗಮಪ ಖ್ಯಾತಿಯ ರಜತ್ ಮಯ್ಯ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ರವೀಂದ್ರ ಪ್ರಭು ಮುಲ್ಕಿ, ಖ್ಯಾತ ಹಿನ್ನೆಲೆ ಗಾಯಕಿಯರಾದ ರೇಷ್ಮಾ ಮಂಜುನಾಥ್, ಪವಿತ್ರಾ ರೂಪೇಶ್ ಹಾಗೂ ರಮ್ಯ ಸುಧೀಂದ್ರ ಇವರಿಂದ ಕಾರ್ಯಕ್ರಮ ಮೂಡಿಬರಲಿದೆ.

ವಿಶೇಷ ಆಕರ್ಷಣೆಯಾಗಿ

ಕೋಸ್ಟಲ್ ಸ್ಟಾರ್ ನ ಗೌರವ್ ಕಾಮತ್, ತನ್ವಿ ಶೆಣೈ, ಸಂತೋಷ್ ಕಡ್ಲೆ, ಹಾಗೂ ಉಮಾಕಾಂತ್ ನಾಯಕ್ ಮೆರುಗು ನೀಡಲಿದ್ದಾರೆ. ಶಶಿಧರ್ ಕಾಸರಗೋಡು ಅವರ ನಿರೂಪಣೆಯಲ್ಲಿ ಕಾರ್ಯಕ್ರಮ ಮೂಡಿಬರಲಿದೆ ಎಂದು ಪ್ರಕಟನೆ ತಿಳಿಸಿದೆ.

LEAVE A REPLY

Please enter your comment!
Please enter your name here