ಪುತ್ತೂರು ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ತವರಿಗೆ ಭೇಟಿ

0

ಪುತ್ತೂರು: ಪುತ್ತೂರು ಬಿಜೆಪಿ ಅಭ್ಯರ್ಥಿಯಾಗಿ ಅಯ್ಕೆಯಾಗಿರುವ ಮಾಜಿ ಜಿ.ಪಂ. ಸದಸ್ಯೆ ಆಶಾ ತಿಮ್ಮಪ್ಪ ಗೌಡರು ಎ.18ರಂದು ಬೆಳಿಗ್ಗೆ ತನ್ನ ತವರೂರಾದ ಸುಳ್ಯದ ಸೋಣಂಗೇರಿ ಸಮೀಪದ ಹೊಸಗದ್ದೆಯ ಮೋಂಟಡ್ಕ ಹಾಗೂ ಸೇರ್ಕಜೆ ಮನೆಗೆ ಭೇಟಿ ನೀಡಿ ಹಿರಿಯರ ಅಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಸ್ಥಳೀಯರಾದ ಲ|ಗಂಗಾಧರ ರೈ ಆಶಾ ತಿಮ್ಮಪ್ಪ ಕುರಿತು ಮಾತನಾಡಿ ಹಿಂದಿನ ದಿನಗಳನ್ನು ಮೆಲುಕು ಹಾಕಿದರು.

ಈ ಸಂದರ್ಭದಲ್ಲಿ ಆಶಾ ತಿಮ್ಮಪ್ಪರ ಸಹೋದರರಾದ ಬಾಲಶೇಖರ, ಗೌರಿಶಂಕರ, ಜಾಲ್ಸೂರು ಗ್ರಾ.ಪಂ.ಮಾಜಿ ಅಧ್ಯಕ್ಷ ಭಾಸ್ಕರ ಹಾಗೂ ಸಂಬಧಿಕರಾದ ಸಿ.ಎ.ಬ್ಯಾಂಕ್ ಮಾಜಿ ಅಧ್ಯಕ್ಷ ಬಾಲಗೋಪಾಲ ಸೇರ್ಕಜೆ, ಗೌತಮ್ ಸೇರ್ಕಜೆ, ಶಾಂತರಾಮ್, ಆನಂತರಾಮ್, ವಸಂತರಾಮ್, ನವೀನ್ ಮುರೂರು, ದಿವಾಕರ, ಸಜ್ಜನ್, ರಂಜನ್, ರಜತ್ , ಸೂರಜ್, ಹರೀಶ, ಮುಕುಂದ, ವಸಂತ, ಚಂದ್ರಪ್ರಭ, ಸರಳ, ಸುಲೋಚನ,ಲೋಲಾಕ್ಷಿ, ಪುಷ್ಪಾವತಿ, ಯೋಗಿತಾ, ನಿಶಾ, ನೂತನ್, ವಸಂತ ಮೋಂಟಡ್ಕ, ಮಮತ, ಪ್ರದ್ವಿನ್, ಸೂರಜ್ ಕಂಪ, ಸುಜಿತ್ ಕುಂಡಡ್ಕ ಮತ್ತು ಅರಿಯಡ್ಕ ಶಕ್ತಿ ಕೇಂದ್ರದ ಅಧ್ಯಕ್ಷ ಸಚಿನ್ ಪಾಪೆಮಜಲು, ಅರಿಯಡ್ಕ ಪಂಚಾಯತ್ ಸದಸ್ಯೆ, ನೆಟ್ಟಣಿಗೆ ಮುಡ್ನೂರು ಮಹಾಶಕ್ತಿ ಕೇಂದ್ರದ ಸಹ ಸಂಚಾಲಕಿ ಭಾರತಿವಸಂತ್ , ನೆಟ್ಟಣಿಗೆಮುಡ್ನೂರು ಗ್ರಾ.ಪಂ.ಸದಸ್ಯೆ, ಪುತ್ತೂರು ತಾ.ಗ್ರಾಮಾಂತರ ಮಹಿಳಾ ಮೋರ್ಚಾದ ಉಪಾಧ್ಯಕ್ಷೆ ಪ್ರಪುಲ್ಲಾ ರೈ ಮೊದಲಾದವರು ಉಪಸ್ಥಿತರಿದ್ದರು.

ಆಶಾ ತಿಮ್ಮಪ್ಪ ಗೌಡರು ಎ.20ರಂದು ನಾಮಪತ್ರ ಸಲ್ಲಿಸಲಿದ್ದಾರೆ.‌

LEAVE A REPLY

Please enter your comment!
Please enter your name here