ಅಬೀರ ಸಾರಿತ್ತಡಿ ಕುಶಾಲಪ್ಪ ಗೌಡ ನಿಧನ

0

ಕಾಣಿಯೂರು: ಬೆಳಂದೂರು ಗ್ರಾಮದ ಅಬೀರ ಸಾರಿತ್ತಡಿ ಕುಶಾಲಪ್ಪ ಗೌಡ (67) ಅವರು ಅಲ್ಪಕಾಲದ ಅಸೌಖ್ಯದಿಂದ ಏ 16ರಂದು ನಿಧನ ಹೊಂದಿದ್ದಾರೆ.

ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿಯ ಉಪಾಧ್ಯಕ್ಷರಾಗಿ, ಕೊಡಿಮಾರು ಅಬೀರ ದೈವಸ್ಥಾನದ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾಗಿ, ಅಗಳಿ ಶ್ರೀ ಸದಾಶಿವ ದೇವಸ್ಥಾನದ ಆಡಳಿತ ಸಮಿತಿ ಹಾಗೂ ಜೀರ್ಣೋದ್ಧಾರ ಸಮಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಮೃತರು ಪತ್ನಿ ರಾಮಕ್ಕ, ಪುತ್ರ ರಾಧಾಕೃಷ್ಣ, ಪುತ್ರಿಯರಾದ ನಳಿನಾಕ್ಷಿ, ಮೀನಾಕ್ಷಿ, ಮೋಹಿನಿ, ಸುಚಿತ್ರಾ ಹಾಗೂ ಸೊಸೆ ಪ್ರೀತಿಕಾ, ಅಳಿಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here