ಎ.20:ರೋಟರಿ ಪುತ್ತೂರು ಈಸ್ಟ್ ರೋಟರಿ ಕ್ಲಬ್ ಪುತ್ತೂರು ಈಸ್ಟ್ ಚಾರಿಟೇಬಲ್ ಟ್ರಸ್ಟ್ ನಿಂದ ನವೀಕೃತ ರೊ|ಕೆ.ರತ್ನಾಕರ್ ಶೆಣೈ ವೇದಿಕೆ, ಹವಾನಿಯಂತ್ರಿತ ಡಾ.ಪಿ.ಗೌರಿ ಪೈ ಅಸೆಂಬ್ಲಿ ಚೇಂಬರ್ ಉದ್ಘಾಟನೆ

0

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಈಸ್ಟ್ ಮತ್ತು ರೋಟರಿ ಕ್ಲಬ್ ಪುತ್ತೂರು ಈಸ್ಟ್ ಚಾರಿಟೇಬಲ್ ಟ್ರಸ್ಟ್ ಜಂಟಿ ಆಶ್ರಯದಲ್ಲಿ ಪ್ರಾಜೆಕ್ಟ್ ಮನೀಷಾ 2023 ಅಂಗವಾಗಿ ಮನೀಷಾ ಸಭಾಂಗಣದ ನವೀಕೃತ ರೊ|ಕೆ.ರತ್ನಾಕರ್ ಶೆಣೈ ವೇದಿಕೆ ಹಾಗೂ ಹವಾನಿಯಂತ್ರಿತ ಡಾ.ಪಿ.ಗೌರಿ ಪೈ ಅಸೆಂಬ್ಲಿ ಚೇಂಬರ್ ನ ಉದ್ಘಾಟನೆಯು ಎ.20 ರಂದು ಸಂಜೆ ನಡೆಯಲಿದೆ.


ರೋಟರಿ 3181 ಇದರ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ರವರು ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರೋಟರಿ 3180 ಇದರ ಪಿಡಿಜಿ ಡಾ.ಭಾಸ್ಕರ್ ಎಸ್, ನಿಯೋಜಿತ(2023-24) ಜಿಲ್ಲಾ ಗವರ್ನರ್ ಎಚ್.ಆರ್ ಕೇಶವ್, ಜಿಲ್ಲಾ ಗವರ್ನರ್ ನಾಮಿನಿ(2024-25) ವಿಕ್ರಂ ದತ್ತ, ಜಿಲ್ಲಾ ಗವರ್ನರ್ ನಾಮಿನಿ(2025-26), ಗೌರವ ಅತಿಥಿಗಳಾಗಿ ಸವಣೂರು ವಿದ್ಯಾರಶ್ಮಿ ವಿದ್ಯಾಸಂಸ್ಥೆಗಳ ಸಂಚಾಲಕ ಕೆ.ಸೀತಾರಾಮ್ ರೈ ಸವಣೂರು, ರೋಟರಿ ವಲಯ ಐದರ ಅಸಿಸ್ಟೆಂಟ್ ಗವರ್ನರ್ ಎ.ಜಗಜ್ಜೀವನ್ ದಾಸ್ ರೈ, ವಲಯ ಸೇನಾನಿ ಪುರಂದರ ರೈ, ಡಿಸ್ಟ್ರಿಕ್ಟ್ ಕಾರ್ಯದರ್ಶಿ ಇವೆಂಟ್ಸ್ ನ ಎಕೆಎಸ್ ಕೆ.ವಿಶ್ವಾಸ್ ಶೆಣೈರವರು ಭಾಗವಹಿಸಲಿದ್ದಾರೆ ಎಂದು ರೋಟರಿ ಕ್ಲಬ್ ಪುತ್ತೂರು ಈಸ್ಟ್ ಅಧ್ಯಕ್ಷ ಶರತ್ ಕುಮಾರ್ ರೈ, ಕಾರ್ಯದರ್ಶಿ ಶಶಿಕಿರಣ್ ರೈ ನೂಜಿ, ಕೋಶಾಧಿಕಾರಿ ವಸಂತ ಜಾಲಾಡಿರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here