ದೇವಳದ ಗದ್ದೆಯಲ್ಲಿ ಮನೆಮಂದಿಯಿಂದ ತಪ್ಪಿದ ಬಾಲಕಿಯನ್ನು ಕ್ಷಣಾರ್ಧದಲ್ಲಿ ಪತ್ತೆ ಮಾಡಿದ ಎಸ್.ಐ ಶ್ರೀಕಾಂತ್ ರಾಥೋಡ್

0

ಪುತ್ತೂರು: ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆ ಗದ್ದೆಯಲ್ಲಿ ಮನೆಮಂದಿಯಿಂದ ತಪ್ಪಿಹೋದ ಬಾಲಕಿಯನ್ನು ಪುತ್ತೂರು ನಗರ ಪೊಲೀಸ್ ಠಾಣೆಯ ಎಸ್.ಐ ಶ್ರೀಕಾಂತ್ ರಾಥೋಡ್ ಅವರು ಕ್ಷಣಾರ್ಧದಲ್ಲೇ ಪತ್ತೆ ಮಾಡಿದ ಘಟನೆ ಎ.20ರಂದು ನಡೆದ ಬಗ್ಗೆ ವರದಿಯಾಗಿದ್ದು, ಎಸ್.ಐ ಅವರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.


ತಪ್ಪಿ ಹೋದ ಬಾಲಕಿಯನ್ನು ಮನೆ ಮಂದಿ ಹುಡುಕಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಎಸ್.ಐ ಗದ್ದೆಯಲ್ಲಿ ಹಲವು ಕಡೆ ವಿಚಾರಣೆ ನಡೆಸಿದಾಗ ಬಾಲಕಿ ಪತ್ತೆಯಾಗಿದ್ದರು. ಬಳಿಕ ದೇವಸ್ಥಾನದಲ್ಲೇ ಇದ್ದ ವಾರಿಸುದಾರರಿಗೆ ಬಾಲಕಿಯನ್ನು ತಲುಪಿಸಿದ್ದಾರೆ. ಅವರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here