![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಆಲಂಕಾರು: ಕರ್ನಾಟಕ ವಿಧಾನ ಸಭಾ ಚುನಾವಣೆ ಮೆ.10 ರಂದು ನಡೆಯಲಿದ್ದು.ಇದರ ಪೂರ್ವಭಾವಿಯಾಗಿ ಆಲಂಕಾರು ಪೇಟೆಯಲ್ಲಿ ಪೋಲಿಸರು ಹಾಗು ಅರೆಸೇನಾ ಪಡೆಯವರು ಫಥ ಸಂಚಲನ ನಡೆಸಿದರು.ನಂತರ ಉಪ್ಪಿನಂಗಡಿ ಸರ್ಕಲ್ ಇನ್ಸ್ ಪೆಕ್ಟರ್ ರವಿ ಬಿ.ಎಸ್ ರವರು ಮಾತನಾಡಿ ಮೆ.10 ರಂದು ಕರ್ನಾಟಕ ವಿಧಾನ ಸಭೆ ಚುನಾವಣೆ ನಡೆಯಲಿದ್ದು. ಮತದಾರರು ಮತಗಟ್ಟೆ ಬಂದು ಸೂಸೂತ್ರವಾಗಿ ಮತ ಚಲಾಯಿಸಲು ಧೈರ್ಯ ತುಂಬುವ ದೃಷ್ಟಿಯಿಂದ ಭಯಮುಕ್ತ ಹಾಗು ನಿರ್ಭಿತಿಯಿಂದ ಮತದಾನ ನಡೆಯುವ ದೃಷ್ಟಿಯಿಂದ ಆಲಂಕಾರು ಪೇಟೆಯಲ್ಲಿ ಫಥ ಸಂಚಾಲನ ನಡೆಸಿರುವುದಾಗಿ ತಿಳಿಸಿ ಚುನಾವಣೆ ನಡೆಯುವ ಸಂಧರ್ಭದಲ್ಲಿ ಅಕ್ರಮ ನಡೆದರೆ ಪೋಲಿಸ್ ಇಲಾಖೆಗೆ ಸಂಪರ್ಕಿಸುವಂತೆ ತಿಳಿಸಿದರು.
ಕಡಬ ಅರಕ್ಷಕ ಠಾಣೆಯ ಉಪನೀರಿಕ್ಷಕರಾದ ಹರೀಶ್ ಹಾಗು ಶಶಿಧರ್ ಮತ್ತು ಪೋಲಿಸ್ ಸಿಬ್ಬಂದಿಗಳು ಹಾಗು ಅರೆಸೇನಾ ಪಡೆಯವರು ಫಥಸಂಚಾಲನ ನಡೆಸಿ ಮತದಾರರಲ್ಲಿ ಅತ್ಮ ವಿಶ್ವಾಸ ಮೂಡಿಸಲಾಯಿತು.