ಏ.26-27: ತಿಂಗಳಾಡಿ ಶ್ರೀ ಮಾರಿಯಮ್ಮ ದೇವಿ ಮಾರಿಪೂಜೆ ಮಹೋತ್ಸವ

0


ಪುತ್ತೂರು: ಕೆದಂಬಾಡಿ ಗ್ರಾಮದ ತಿಂಗಳಾಡಿ ಗಾಂಧಿನಗರದಲ್ಲಿರುವ ಶ್ರೀ ಮಾರಿಯಮ್ಮ ದೇವಿ ದೇವಸ್ಥಾನದಲ್ಲಿ ಜರಗುವ ಶ್ರೀ ಮಾರಿಪೂಜೆ ಮಹೋತ್ಸವವು ಏ.26 ಮತ್ತು 27ರಂದು ವಿಜೃಂಭಣೆಯಿಂದ ಜರಗಲಿದೆ. ಏ.26 ರಂದು ಬೆಳಿಗ್ಗೆ ಗಣಪತಿ ಹೋಮ, ಮಧ್ಯಾಹ್ನ ಶುದ್ಧಿ ಕಲಶ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಭಂಡಾರ ತೆಗೆಯುವ ಕಾರ್ಯಕ್ರಮ ನಡೆದು ಭಂಡಾರ ಶುದ್ಧಿಗೊಳಿಸುವುದು ನಡೆದು ಭಂಡಾರವನ್ನು ಉತ್ಸವ ಬಯಲಿಗೆ ಕೊಂಡೊಯ್ಯುವ ಕಾರ್ಯಕ್ರಮ ನಡೆಯಲಿದ್ದು, ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಶ್ರೀ ದೇವಿಯ ಗುಡಿ ಪ್ರತಿಷ್ಠಾಪಿಸುವುದು ನಡೆಯಲಿದ್ದು, 11:30 ಕ್ಕೆ ಗುಳಿಗ, ಪಂಜುರ್ಲಿ, ಕಲ್ಲುರ್ಟಿ, ಶನಿಗುಳಿಗ, ಕಾಲಭೈರವ ದೈವಗಳ ದರ್ಶನ ಮತ್ತು ತಂಬಿಲ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ರಾತ್ರಿ 9 ರಿಂದ ಮಕ್ಕಳಿಂದ ಮತ್ತು ಊರವರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ರಾತ್ರಿ 11 ಕ್ಕೆ ಶಾರದಾ ಆರ್ಟ್ಸ್ ತಂಡದ ಐಸಿರಿ ಕಲಾವಿದೆರ್ ಮಂಜೇಶ್ವರ ಇವರಿಂದ ‘ಮಲ್ಲ ಸಂಗತಿಯೇ ಅತ್ತ್’ ಎಂಬ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ.

ಏ.27ರಂದು ಸೂರ್ಯೋದಯಕ್ಕೆ ಮಾಡಿ ಕಡಿಯುವುದು, ಬೆಳಿಗ್ಗೆ ಅಮ್ಮನವರ ದರ್ಶನ ಮತ್ತು ಇತರ ದೈವಗಳ ದರ್ಶನ ಮಧ್ಯಾಹ್ನ ಮಹಾಪೂಜೆ, ಹರಿಕೆ ಕಾಣಿಕೆ ಸ್ವೀಕಾರ ನಡೆದು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಭಂಡಾರವನ್ನು ದೇವಾಲಯಕ್ಕೆ ಕೊಂಡೊಯ್ಯುವ ಕಾರ್ಯಕ್ರಮ ನಡೆದು ಏ.28ರಂದು ಸೂರ್ಯೋದಯಕ್ಕೆ ಶ್ರೀ ದೇವಿಯ ಭಂಡಾರ ಪ್ರತಿಷ್ಠಾಪನೆಯೊಂದಿಗೆ ಕಾರ್ಯಕ್ರಮ ಸಮಾಪ್ತಿಗೊಳ್ಳಲಿದೆ. ಸೇವಾರೂಪದಲ್ಲಿ ನೂತನವಾಗಿ ನಿರ್ಮಾಣಗೊಂಡ ದೇವಸ್ಥಾನದ ಮೆಟ್ಟಿಲುಗಳ ಸಮರ್ಪಣೆ ಏ.26ರಂದು ಬೆಳಿಗ್ಗೆ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಊರ ಪರವೂರ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ದೇವಿಯ ಗಂಧ ಪ್ರಸಾದ, ಅನ್ನಪ್ರಸಾದವನ್ನು ಸ್ವೀಕರಿಸುವಂತೆ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಮಾದಿಗ, ಶ್ರೀ ಮಾರಿಯಮ್ಮ ಸೇವಾ ಸಮಿತಿಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರುಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
………..
ಜಾಹೀರಾತು ಇದೆ.

LEAVE A REPLY

Please enter your comment!
Please enter your name here