ತಾರಿಗುಡ್ಡೆಯಲ್ಲಿ ಜೆಡಿಎಸ್‌ ಪ್ರಚಾರ ಸಭೆ-ಹಲವು ಮಂದಿ ಸೇರ್ಪಡೆ

0

ಪುತ್ತೂರು: ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ದಿವ್ಯಪ್ರಭಾ ಗೌಡ ಚಿಕ್ಕಮುಡ್ನೂರು ವಾರ್ಡ್‌ ನ ತಾರಿಗುಡ್ಡೆಯಲ್ಲಿ ಮಿಂಚಿನ ಸಂಚಾರ ಮಾಡಿ ಚುನಾವಣೆ ಪ್ರಚಾರ ನಡೆಸಿದರು.

ಈ ಸಂದರ್ಭದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಅಬ್ದುಲ್ಲಾ ಕೆದುವಡ್ಕ, ಶಿವ ಸಾಲಿಯಾನ್‌, ರಾಧಾಕೃಷ್ಣ ಸಾಲಿಯಾನ್‌, ಅಶ್ರಫ್‌ ಕೆಮ್ಮಾಯಿ, ಸತ್ತಾರ್‌ ಮುನ್ಲಿಯಾರ್‌, ಜುನೈದ್‌ ಮತ್ತಿತರು ಐ ಸಿ ಕೈಲಾಶ್‌ ಗೌಡ ನೇತ್ರತ್ವದಲ್ಲಿ ಜೆಡಿಎಸ್‌ ಸೇರ್ಪಡೆಗೊಂಡರು. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಕಾರ್ಯವೈಖರಿಗೆ ಜನರು ಬೇಸತ್ತು ಹೋಗಿದ್ದು, ಕುಮಾರ ಸ್ವಾಮಿಯವರ ಪಂಚರತ್ನ ಯೋಜನೆ ಜನರಿಗೆ ಭರವಸೆ ಮೂಡಿಸಿದೆ. ಈ ನಿಟ್ಟಿನಲ್ಲಿ ಎಲ್ಲರೂ ಜೆಡಿಎಸ್‌ ಬೆಂಬಲಿಸುವಂತೆ ಐ ಸಿ ಕೈಲಾಶ್‌ ಮತ್ತು ಜೆಡಿಎಸ್‌ ಅಭ್ಯರ್ಥಿ ದಿವ್ಯಪ್ರಭಾ ಗೌಡ ಮತಯಾಚನೆ ನಡೆಸಿದರು.

LEAVE A REPLY

Please enter your comment!
Please enter your name here