ಪುತ್ತೂರು: ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರ ಬೆಂಬಲಿಗರಿಂದ ಎ.27ರಂದು ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿಯಲ್ಲಿ ಚುನಾವಣಾ ಪ್ರಚಾರ ಸಭೆ ನಡೆಯಿತು.
ಅರುಣ್ ಕುಮಾರ್ ಪುತ್ತಿಲ ಅವರು ಮಾತನಾಡಿ ಹಿಂದುತ್ವದ ರಕ್ಷಣೆ, ಭ್ರಷ್ಟಾಚಾರ ರಹಿತ, ಜನಸ್ನೇಹಿ ಅಡಳಿತ ನೀಡುವ ಭರವಸೆಯ ಅನೇಕ ಯೋಜನೆಗಳೊಂದಿಗೆ ಈಗಾಗಲೇ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಗಿದೆ.

ಇದರ ಜೊತೆಗೆ ಹಿಂದುತ್ವದ ಉಳಿವು ನಮ್ಮ ಮುಖ್ಯ ಗುರಿಯಾಗಿರಲಿದೆ. ಈ ನಿಟ್ಟಿನಲ್ಲಿ ಕಾರ್ಯಕರ್ತರು ಅತಿ ಮತದಾರರನ್ನು ಸಂಪರ್ಕ ಮಾಡಿ ಬಹುಮತದ ಮೂಲಕ ಹಿಂದುತ್ವಕ್ಕಾಗಿ ಮತ ನೀಡುವಂತೆ ಮನವಿ ಮಾಡಲು ವಿನಂತಿಸಿದರು.

ಈ ಸಂದರ್ಭದಲ್ಲಿ ಅಣ್ಣಿ ಪೂಜಾರಿ ಬರ‍್ನಹಿತ್ಲು, ಪ್ರಕಾಶ್, ಕಾರ್ತಿಕ್ ಅಂದ್ರಟ್ಟ, ವಿನೋದ್‌ಚಂದ್ರ ಬಡಾವು, ಡೀಕಯ್ಯ ಬನ್ನೂರು ಸಹಿತ ನೂರಾರು ಮಂದಿ ಬೆಂಬಲಿಗರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here