ಸೊರಕೆ, ಕಟ್ಟತ್ತಡ್ಕ, ಪೆರಂಟೋಲು, ಮೇಗಿನಗುತ್ತು ಪರಿಸರದಲ್ಲಿ ಕಾಂಗ್ರೆಸ್ ಪರ ಬಿರುಸಿನ ಮತಯಾಚನೆ

0

ಪುತ್ತೂರು: ಸರ್ವೆ ಗ್ರಾಮದ ಮೂರು ಬೂತ್‌ಗಳಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಮನೆ-ಮನೆ ಭೇಟಿ ನೀಡಿ ಬಿರುಸಿನ ಮತ ಯಾಚನೆ ನಡೆಸಲಾಯಿತು. ಮೇಗಿನಗುತ್ತು ತರವಾಡು ದೈವಸ್ಥಾನದಲ್ಲಿ ಪ್ರಾರ್ಥಿಸಿ ಮನೆ ಮನೆ ಭೇಟಿಗೆ ಚಾಲನೆ ನೀಡಲಾಯಿತು. ಸೊರಕೆ, ಕಟ್ಟತ್ತಡ್ಕ, ಪೆರಂಟೋಲು, ಮೇಗಿನಗುತ್ತು ಪರಿಸರದಲ್ಲಿ ಮನೆ-ಮನೆ ತೆರಳಿದ ನಾಯಕರು ಮತ್ತು ಕಾರ್ಯಕರ್ತರು ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಬಗ್ಗೆ ಹಾಗೂ ಕಾಂಗ್ರೆಸ್ ಕೊಡುಗೆಗಳ ಬಗ್ಗೆ ತಿಳಿಸಿಕೊಟ್ಟು ಅಶೋಕ್ ಕುಮಾರ್ ರೈವರನ್ನು ಗೆಲ್ಲಿಸವಂತೆ ಮನವಿ ಮಾಡಿದರು.

ಸರ್ವೆ ವಲಯ ಕಾಂಗ್ರೆಸ್ ಅಧ್ಯಕ್ಷ ಎಸ್.ಡಿ ವಸಂತ, ವಲಯ ಚುನಾವಣಾ ಉಸ್ತುವಾರಿ ರಾಮಚಂದ್ರ ಸೊರಕೆ, ಬ್ಲಾಕ್ ಸಾಮಾಜಿಕ ಜಾಲತಾಣಗಳ ಅಧ್ಯಕ್ಷ ಸಿದ್ದೀಕ್ ಸುಲ್ತಾನ್ ಕೂಡುರಸ್ತೆ, ವಲಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಮರಿಯ, ಬೂತ್ ಸಮಿತಿ ಅಧ್ಯಕ್ಷರಾದ ಯತೀಶ್ ರೈ ಮೇಗಿನಗುತ್ತು, ಅಶೋಕ್ ಎಸ್.ಡಿ, ಪ್ರಮುಖರಾದ ಕೆ.ಎಂ ಹನೀಫ್ ರೆಂಜಲಾಡಿ, ಯೋಗಿನಿ ರೈ ಮೇಗಿನಗುತ್ತು, ಅಝೀಝ್ ರೆಂಜಲಾಡಿ, ಸುಮತಿ, ಶಶಿಧರ್ ಎಸ್.ಡಿ, ರಾಜೇಶ್ ಎಸ್.ಡಿ, ಝೈನುದ್ದೀನ್ ಜೆ.ಎಸ್, ಹನೀಫ್ ಕಲ್ಪಣೆ, ಕೊರಗಪ್ಪ ಸೊರಕೆ, ಸಂಜೀವ ನಾಯ್ಕ ಸೊರಕೆ, ಧನಂಜಯ ಸೊರಕೆ, ಅಣ್ಣು, ಇಸ್ಮಾಯಿಲ್ ಕಟ್ಟತ್ತಡ್ಕ, ಕಿರಣ್ ಎಸ್.ಡಿ, ಗ್ರಾ.ಪಂ ಸದಸ್ಯರಾದ ವಿಜಯಾ ಕರ್ಮಿನಡ್ಕ, ಕಮಲಾ ನೇರೋಳ್ತಡ್ಕ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here